Saturday, January 21, 2012

Karnataka Music Concert by Shankarimoorthi

Karnataka Music Concert by Shankarimoorthi

Bangalore: Kala Vedike of Akhila Karnataka Havyaka Mahasabha has organised a Carnatic Music Concert by Shankarimoorthy Balila on Sunday  22 January 2012 evening 6 pm at Sri Akhila Havyaka Sabha Bhavan, Malleshwaram Bangalore.

Shankaraimoorthi's classical vocal CD  "Kanakangi" by Lahari Velu will also be released on the occasion.

Shankari is living in small village near Kukke Subrahmanya and  a promising artist with delightful and melodious voice.

Ayurveda Kuteeram of HBR Layout, Bangalore has sponsored the event.

Pls click the image below to read full details on the event and invitation.

-Nethrakere Udaya Shankara


Friday, January 6, 2012

C.V.L. Shastry no more

C.V.L. Shastry no more

Bangalore: Senior film producer, former president of Film Chamber of Karnataka and former president of Akhila Karnataka Brahmana Mahasabha Sri C.V.L. Shastry is no more. He died at Bangalore Thursday midnight (05 January 2012).

Mr. Shastry, winner of Dadasaheb Phalke Academy Award was the senior producer of Kannada films. The award of 'Legendary Film Producer' was bestowed on CVL Shastry in 2008 at Mumbai.

An industrialist and key person in touring talkies revolution in Karnataka C.V.L.Sastry produced films like 'Malaya Marutha, Aaseya Bale and Kalla Kulla' all of them starring Dr.Vishnuvardhana.

'Malgudi Days' for television based on R.K.Narayan's novel in the direction of Shanker Nag was produced by Shastry.

He held the position of President of Karnataka Film chamber of commerce also.


Thursday, January 5, 2012

ಊಟ ಆಯಿತಾ?: ಮುಂಡಾಸು 30 ಮೊಳ..! (Mundasu 30 mola..!)

ಊಟ ಆಯಿತಾ?: ಮುಂಡಾಸು 30 ಮೊಳ..!
 (Mundasu 30 mola..!)


ಊಟ ಆಯಿತಾ ಅಂತ ಕೇಳಿದರೆ ಮುಂಡಾಸು ಮೂವತ್ತು ಮೊಳ ಎಂದೊಬ್ಬ ಉತ್ತರಿಸಿದನಂತೆ. ಬೃಹತ್ ಬೆಂಗಳೂರು  ಮಹಾನಗರ ಪಾಲಿಕೆಯ ಸಿಬ್ಬಂದಿ ಇದೇ ವರ್ಗಕ್ಕೆ ಸೇರಿದವರು. ಏನಾದರೂ ಮಾಹಿತಿ  ಬೇಕು ಎಂದು ನೀವೇನಾದರೂ ಬಿಬಿಎಂಪಿಗೆ ಹೋದಿರೋ ಮುಗಿಯಿತು ಕಥೆ. ಕನಿಷ್ಠ ಹತ್ತಿಪ್ಪತ್ತು ಮೇಜುಗಳಿಗೆ ಸುತ್ತು ಹೊಡೆಯಬೇಕು. ಅಷ್ಟಾದರೂ ನಿಮಗೆ ಬೇಕಾದ ಮಾಹಿತಿ ಸಿಕ್ಕೀತು ಎನ್ನಲಾಗದು.

ಈ ಕಷ್ಟ ಯಾಕೆ ಅಂತ ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿದಿರೋ- ಅಲ್ಲೂ ನಿಮಗೆ ಬೇಕಾದ ಉತ್ತರವೇನೂ ಸಿಕ್ಕುವುದಿಲ್ಲ. ಕಟ್ಟ ಕಡೆಗೆ ನಿಮ್ಮ ತಲೆಯಲ್ಲಿ ಉಳಿಯುವುದು ಮೇಲೆ ತಿಳಿಸಿದಂತೆ 'ಮುಂಡಾಸು ಮೂವತ್ತು ಮೊಳ' ಮಾತ್ರ..!

ಬಿಬಿಎಂಪಿ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಬರುವ ಸಚ್ಚಿದಾನಂದ ನಗರದ ನಿವೇಶನದಾರರ ಗೋಳಿಗೆ ಈಗ ಎರಡು ದಶಕ.  ಕಾರಣವೇ ಇಲ್ಲದೆ ಈ ನಿವೇಶನದಾರರನ್ನು  ಗೋಳಾಡಿಸುತ್ತಿರುವ ಬಿಬಿಎಂಪಿ ಸಿಬ್ಬಂದಿ, ಅವರಿಗೆ ಕುಮ್ಮಕ್ಕು  ನೀಡುತ್ತಿರುವ ಜನ ಪ್ರತಿನಿಧಿಗಳು.  ಇವರೆಲ್ಲರ ತಕರಾರುಗಳಿಗೆ ಸಿವಿಲ್ ನ್ಯಾಯಾಲಯದಿಂದ ಹಿಡಿದು ಸುಪ್ರೀಂಕೋರ್ಟ್ ವರೆಗೂ ವಿವಿಧ ನ್ಯಾಯಾಲಯಗಳು ನೀಡಿರುವ ತೀರ್ಪುಗಳು  ಸ್ಪಷ್ಟ ಉತ್ತರ. ಈ ನಿವೇಶನದಾರರರಿಂದ ತೆರಿಗೆ ಪಡೆಯಿರಿ, ಖಾತೆ ಕೊಡಿ, ಕಟ್ಟಡ ನಕ್ಷೆ ಮಂಜೂರು  ಮಾಡಿ. ವಸತಿದಾರರಿಗೆ ಸಹ್ಯ ಜೀವನ ನಡೆಸುವುದಕ್ಕೆ ಬೇಕಾದ ಸವಲತ್ತು ಕೊಡಿ ಎಂಬುದಾಗಿ ಸಿವಿಲ್ ನ್ಯಾಯಾಲಯ ನೀಡಿದ ತೀರ್ಪನ್ನು ಹೈಕೋರ್ಟ್, ಸುಪ್ರೀಂಕೋರ್ಟುಗಳು ಎತ್ತಿ ಹಿಡಿದಿವೆ. ಈ ಬಡಾವಣೆ ಶಾಸನಬದ್ಧ ಹಾಗೂ ಅದರ ಭೂ ಮಾಲೀಕತ್ವದ ವಿವಾದ ಅಂತಿಮಗೊಂಡಿದೆ ಎಂಬುದಾಗಿ ಇಡೀ ಪ್ರಕರಣದ ಪರಿಶೀಲನೆ ನಡೆಸಿರುವ ಕರ್ನಾಟಕ ಲೋಕಾಯುಕ್ತರೂ ಸ್ಪಷ್ಟ ಪಡಿಸಿದ್ದಾರೆ. ಸಿವಿಲ್ ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿ ಎಂಬುದಾಗಿ ರಾಜ್ಯ ಸರ್ಕಾರವೂ ಆದೇಶ ನೀಡಿದೆ. ಆದರೆ ಬಿಬಿಎಂಪಿ ಮತ್ತು  ರೆವೆನ್ಯೂ  ಇಲಾಖೆಯ ಅಧಿಕಾರಿಗಳಿಗೆ ಇದನ್ನು ಪಾಲಿಸುವ ಮನಸ್ಸಿಲ್ಲ.


ಸುಪ್ರೀಂಕೋರ್ಟ್ ತೀರ್ಪು ಅನುಷ್ಠಾನ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮ ಏನು ಎಂಬುದಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪ್ರಶ್ನಿಸಿದರೆ ಆ ಅರ್ಜಿ ನಗರಾಭಿವೃದ್ಧಿ ಮುಖ್ಯಕಾರ್ಯದರ್ಶಿಗಳಿಗೆ ಹೋಗಿ ಅಲ್ಲಿಂದ ಬಿಬಿಎಂಪಿ ಕಮೀಷನರ್ ಕಚೇರಿ ಸೇರಿ ಮುಂದೆ ಬಿಬಿಎಂಪಿ ರಾಜರಾಜೇಶ್ವರಿ ವಲಯ ಕಚೇರಿಯ ಅಡಿಷನಲ್ ಕಮೀಷನರ್ ಕಚೇರಿಗೆ ಬಿಜಯಂಗೈದು, ಅಸಿಸ್ಟೆಂಟ್ ರೆವೆನ್ಯೂ ಆಫೀಸರ್  (ಎಆರ್ಓ)  ಮೇಜಿಗೆ ತಲುಪಿತು.  ಈ ಎಆ್ಓ ,,ಮಹಾಶಯರು ತೀರ್ಪಿನ ಅನುಷ್ಠಾನ ಕುರಿತ ಮಾಹಿತಿ ಕೊಡುವ ಬದಲು 2002ರಷ್ಟು ಹಳೆಯದಾದ ಜಿಲ್ಲಾಧಿಕಾರಿಗಳ ಪತ್ರ, ಅಸಿಸ್ಟೆಂಟ್ ಕಮೀಷನರ್ ಆದೇಶವನ್ನು ಕಳುಹಿಸಿ ಅದರ ಜೊತೆಗೆ ಮೇಲೆ ತಿಳಿಸಿದ ತೀರ್ಪುಗಳನ್ನೂ ಕಳುಹಿಸುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ..

ಈ ಪತ್ರದ ಜೊತೆಗೆ ಮೇಲೆ ತಿಳಿಸಿದ ತೀರ್ಪುಗಳು ಇರಲಿಲ್ಲ ಎಂಬುದನ್ನು ಬಿಟ್ಟು  ಬಿಡೋಣ,  ಆದರೆ ಈ ತೀರ್ಪಿನ ಪ್ರತಿಗಳನ್ನು ಅವರ ಬಳಿ ಕೇಳಿದವರು  ಯಾರು?  ಜಿಲ್ಲಾಧಿಕಾರಿ, ಅಸಿಸ್ಟೆಂಟ್ ಕಮೀಷನರ್  ಪತ್ರಗಳನ್ನು ಕೇಳಿದವರು ಯಾರು? ಸುಪ್ರೀಂಕೋರ್ಟ್ ತೀರ್ಪು ಪಾಲನೆಗೆ ಈ  ಜಿಲ್ಲಾಧಿಕಾರಿಯ ಪತ್ರ, ಅಸಿಸ್ಟೆಂಟ್ ಕಮೀಷನರ್ ಅವರ ಪತ್ರಗಳು  'ತಡೆಯಾಜ್ಞೆ' ಆದ್ದರಿಂದ ಸುಪ್ರೀಂಕೋರ್ಟ್ ತೀರ್ಪು ಪಾಲಿಸಿಲ್ಲ ಎಂಬುದು ಅವರ ಈ  ವರ್ತನೆಯ ಅರ್ಥವೇ?


ಈ ಬಗ್ಗೆ ಬಿಬಿಎಂಪಿ ಕಮೀಷನರ್,  ಮುಖ್ಯ ಕಾರ್ಯದರ್ಶಿಗಳು, ಮುಖ್ಯಮಂತ್ರಿಗಳ ಗಮನ ಸೆಳೆಯೋಣ ಎಂದು ಸರ್ಕಾರದ 'ಇ-ಆಡಳಿತ' ದ ವ್ಯವಸ್ಥೆಯ ಮೊರೆ ಹೊಕ್ಕರೆ ...!  ಒಂದೂ ಪತ್ರಗಳು ಅವರಿಗೆ ತಲುಪಲೇ ಇಲ್ಲ. -ಇ-ಮೇಲ್ ಮೂಲಕ ಕಳುಹಿಸಿದ ಪತ್ರಗಳೆಲ್ಲ, 'ಡೆಲಿವರಿ ಫೈಲ್ಡ್' ಎಂಬ ಷರಾದೊಂದಿಗೆ ನನ್ನ ಮೆಯಿಲ್ ಬಾಕ್ಸಿಗೆ ಮರಳಿ ಬಂದಿವೆ.

ಇದಕ್ಕೆ ಏನು ಹೇಳೋಣ?  

ಅಧಿಕಾರಿಗಳಿಗೆ ಜೈ ಎನ್ನೋಣವೇ?  ಪ್ರಶ್ನೆ ಅರ್ಥ ಮಾಡಿಕೊಳ್ಳಲಾಗದ ಇಲ್ಲವೇ ಅರ್ಥವಾಗದಂತೆ ನಟಿಸುತ್ತಿರುವ ಬಿಬಿಎಂಪಿ ಎ ಆರ್ ಓ ಅವರ  ಜಾಣ ನಿಲುವಿಗೆ ಜೈ ಎನ್ನೋಣವೇ?  ಇ-ಆಡಳಿತ ಮೂಲಕ ಜನರ ಸಮಸ್ಯೆಗಳನ್ನು ಕ್ಷಿಪ್ರವಾಗಿ ನಿವಾರಿಸಬಹುದೆಂಬ ಹವಣಿಕೆಯಲ್ಲಿ ಇರುವ ಬಿಬಿಎಂಪಿ, ಸರ್ಕಾರ, ಮುಖ್ಯಮಂತ್ರಿಗಳ ಹುಮ್ಮಸ್ಸಿಗೆ ಅಡಚಣೆ ಒಡ್ಡುತ್ತಿರುವ '-ಇ-ಆಡಳಿತ ವ್ಯವಸ್ಥೆ'ಗೆ ಜೈ ಎನ್ನೋಣವೇ?

  ಇಷ್ಟೆಲ್ಲ ಕಷ್ಟ ಯಾಕೆ ಸ್ವಾಮೀ?  ಒಂದಷ್ಟು ಕಾಸು  ಬಿಸಾಕಿ ಕೆಲಸ ಮಾಡಿಸಿಕೊಳ್ಳಿ ಎಂದು ಹೇಳೋಣವೇ?

ವಿವರಗಳಿಗಾಗಿ ಚಿತ್ರಗಳನ್ನು ಕ್ಲಿಕ್ಕಿಸಿ 

-ನೆತ್ರಕೆರೆ ಉದಯಶಂಕರ .

Sunday, January 1, 2012

2011ರ ಪರದಾಟ ಮುಗಿವುದೇ 2012ರಲ್ಲಿ?

2011ರ ಪರದಾಟ ಮುಗಿವುದೇ 2012ರಲ್ಲಿ?


2011 ರಲ್ಲಿ ಅನುಭವಿಸಿದ ಈ ಪರಿ ಪರದಾಟ 2012ರಲ್ಲಾದರೂ ಮುಗಿಯುವುದೇ? ಬಸ್ಸಿನಲ್ಲಿ ಸೀಟು ಹಿಡಿಯಲಷ್ಟೇ ಅಲ್ಲ, ಬಸ್ಸು ಚಲಾಯಿಸಲೂ ನಾವೇ ತಿಣುಕಬೇಕು. ಹೀಗೆ ತಿಣುಕಾಡಿ ಓಡಿ ಸೀಟು ಹಿಡಿದು ಕಾಸು  ಕೊಟ್ಟು ಪಯಣಿಸಬೇಕು..!

ಈ ಪರಿ ಪರದಾಡಬೇಕಾದ ಬೇರೆ ಘಟನೆಗಳನ್ನು ಮೆಲುಕು ಹಾಕಬಲ್ಲಿರಾ? ಈ ವಿಡಿಯೋ ಕೆನ್ ಕಲಾಶಾಲೆಯ ವಿದ್ಯಾರ್ಥಿ ಅನುಪ್ ಕೃಷ್ಣ ನೆತ್ರಕೆರೆ ಅವರದ್ದು.

-ನೆತ್ರಕೆರೆ ಉದಯಶಂಕರ

Advertisement