My Blog List

Friday, February 29, 2008

They sought the help of Cows to combat suicides!

A Farmers Convention organized by Sri Ramachandra pura Math at Goloka in Kaggalipura of Dinnepalya, Bangalore neither requested the Government to provide subsidy nor to waive loans. It appealed to support the farmers to re-introduce conventional cultivation system based on cows of Indian Breed. It firmly expressed the confidence that Cow based Agriculture is the lone alternative to protect farmers from suicides.

ಗೋಲೋಕದಲ್ಲಿ ರೈತ ಸಮಾವೇಶ

ಆತ್ಮಹತ್ಯೆ ವಿರುದ್ಧ ಹೋರಾಟಕ್ಕೆ ಅವರು

ಗೋವಿನ ನೆರವು ಕೇಳಿದರು..!

ಈ ಸಮಾವೇಶ ಬೇಡಿಕೆಗಳ ಉದ್ದುದ್ದ ಪಟ್ಟಿಯನ್ನು ಸರ್ಕಾರದ ಮುಂದೆ ಇಡಲಿಲ್ಲ. ರಸಗೊಬ್ಬರದ ಏರುತ್ತಿರುವ ಬೆಲೆಗಳನ್ನು ಇಳಿಸಿ ಎಂದು ಕೂಗು ಹಾಕಲಿಲ್ಲ. ಸಾಲ ಮನ್ನಾ ಮಾಡಿ ಎಂದು ಗೋಳಿಡಲಿಲ್ಲ, ಕೃಷಿಗೆ ಸಬ್ಸಿಡಿ ಕೊಡಿ ಎಂದು ಮನವಿ ಮಾಡಲೂ ಇಲ್ಲ. ರೈತ ಸಮಾವೇಶ ಸರ್ಕಾರಗಳಿಗೆ ಮಾಡಿದ್ದು ಒಂದೇ ಒಂದು ಮನವಿ: ಗೋವು ಆಧಾರಿತ ಕೃಷಿ ಕೈಗೆತ್ತಿಕೊಳ್ಳಲು ರೈತರಿಗೆ ಸಂಪೂರ್ಣ ಬೆಂಬಲವಾಗಿ ನಿಲ್ಲಿ. ಅಷ್ಟು ಸಾಕು. ನಾವು ಸ್ವಾವಲಂಬಿಗಳಾಗಬಲ್ಲೆವು.

ನೆತ್ರಕೆರೆ ಉದಯಶಂಕರ

ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ಕೊಟ್ಟದ್ದಾಯಿತು. ರಾಜಕೀಯ ಧುರೀಣರು ರೈತರ ಸಾಲ ಮನ್ನಾ ಘೋಷಣೆಯ ಕೂಗು ಹಾಕಿದ್ದಾಯಿತು. ಕೇಂದ್ರ ಸರ್ಕಾರ ಕೋಟಿಗಟ್ಟಲೆ ರೂಪಾಯಿಗಳ ಪ್ಯಾಕೇಜ್ ಪ್ರಕಟಿಸಿದ್ದೂ ಆಯಿತು.

ಆದರೆ ರೈತರ ಆತ್ಮಹತ್ಯೆಗಳ ಸರಣಿ ಮಾತ್ರ ನಿಲ್ಲಲಿಲ್ಲ.. ಜಾಗತೀಕರಣ ಆರಂಭವಾದ ಬಳಿಕ ಹೆಚ್ಚು ಕಡಿಮೆ ಒಂದು ದಶಕದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ದುರಂತ ವರ್ತಮಾನವನ್ನು ಪತ್ರಿಕೆಗಳಲ್ಲಿ ಓದಿದ್ದು, ಟಿವಿಯಲ್ಲಿ ನೋಡಿದ್ದಾಯಿತು. ಅದನ್ನು ತಡೆಯಲೆಂದು ಏನೆಲ್ಲ ಪ್ರಯತ್ನ ಮಾಡಿದ ಬಳಿಕವೂ ಈಗ ಬಂದಿರುವ ವರದಿಗಳ ಪ್ರಕಾರ ರಾಷ್ಟ್ರದಲ್ಲಿ ಕಳೆದ ವರ್ಷದ ಕೇವಲ ಆರು ತಿಂಗಳ ಅವಧಿಯಲ್ಲಿ ಮತ್ತೆ 800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಹಾರಾಷ್ಟ್ರದ ರೈತರ ಸಲುವಾಗಿಯೇ ಭಾರೀ ಪ್ಯಾಕೇಜನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದರೂ ಮತ್ತ್ತೆ 607 ರೈತರನ್ನು ಆ ರಾಜ್ಯ ಕಳೆದುಕೊಂಡಿದೆ. ಆಂಧ್ರ ಪ್ರದೇಶದಲ್ಲಿ 114, ಕರ್ನಾಟಕದಲ್ಲಿ 73. ಕೇರಳದಲ್ಲಿ 13 ರೈತರು ಆತ್ಮಹತ್ಯೆಗೆ ಶರಣಾದರು ಎಂದು ಹೇಳುತ್ತದೆ ವರದಿ.

ಇದು ಕೇಂದ್ರ ಸರ್ಕಾರಕ್ಕೆ ಲಭಿಸಿದ ಅಧಿಕೃತ ಅಂಕಿಅಂಶಗಳು ಮಾತ್ರ. ಪಂಜಾಬ್, ಹರಿಯಾಣ, ದೆಹಲಿ, ಗುಜರಾತ್, ರಾಜಸ್ಥಾನ, ಗೋವಾ ಮತ್ತಿತರ ರಾಜ್ಯಗಳು ಈ ಸಂಬಂಧದಲ್ಲಿ ಸಮರ್ಪಕವಾದ ಮಾಹಿತಿಯನ್ನೇ ಒದಗಿಸಿಲ್ಲ.

ಅಂದರೆ ಸರ್ಕಾರಗಳು ತಿಪ್ಪರಲಾಗ ಹಾಕಿದರೂ ರೈತರ ಆತ್ಮಹತ್ಯೆಯ ಪ್ರವೃತ್ತಿಗೆ ಕಡಿವಾಣ ಬಿದ್ದಿಲ್ಲ, ರೈತರಲ್ಲಿ ಭವಿಷ್ಯದ ಬಗೆಗಿನ ಭೀತಿ ದೂರವಾಗಿಲ್ಲ ಎಂದೇ ಅರ್ಥ. ಎಲ್ಲಿಯವರೆಗೆ ರೈತರಲ್ಲಿ ಕೃಷಿ ಮಾಡುವುದರಿಂದ ನನ್ನ ಭವಿಷ್ಯಕ್ಕೆ ಅಪಾಯವಿಲ್ಲ ಎಂಬ ಭಾವನೆ ಮೂಡುವುದಿಲ್ಲವೋ ಅಲ್ಲಿಯವರೆಗೆ ಈ ಆತ್ಮಹತ್ಯೆಯ ಪ್ರವೃತ್ತಿ ತಗ್ಗಲು ಸಾಧ್ಯವೇ ಇಲ್ಲ ಎಂಬುದೇ ಇದರಿಂದ ಕಲಿಯಬೇಕಾದ ಪಾಠ.

ಹಾಗಾದರೆ ಆತ್ಮಹತ್ಯೆಯ ಈ ಸರಣಿಯಿಂದ ರೈತರನ್ನು ಪಾರು ಮಾಡುವುದಾದರೂ ಹೇಗೆ?

ಇಂತಹ ಗಂಭೀರ ಚಿಂತನೆ ಬೆಂಗಳೂರಿನ ದಿಣ್ಣೆಪಾಳ್ಯದ ಕಗ್ಗಲಿಪುರದಲ್ಲಿರುವ ಗೋಲೋಕದಲ್ಲಿ ಇತ್ತೀಚೆಗೆ, ಫೆಬ್ರುವರಿ 17ರಂದು ನಡೆಯಿತು. ಆದರೆ ಸರ್ಕಾರದ ವತಿಯಿಂದ ಅಲ್ಲ, ನಶಿಸುತ್ತಿರುವ ಭಾರತೀಯ ಗೋ ಸಂತತಿಯ ಉಳಿವಿಗಾಗಿ ತಮ್ಮ ಜೀವಮಾನವನ್ನೇ ಮುಡುಪಾಗಿ ಇಟ್ಟಿರುವ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಪ್ರೇರಣೆಯಿಂದ ನಡೆದ ರೈತ ಸಮಾವೇಶ- ಸಮರ್ಪಣ ಕಾರ್ಯಕ್ರಮದ ಸಂದರ್ಭದಲ್ಲಿ.

ಸ್ವಾವಲಂಬಿಯಾದ ಪಾರಂಪರಿಕ ಗೋ ಆಧಾರಿತ ಸುಸ್ಥಿರ ಕೃಷಿಗೆ ಮರಳುವುದೊಂದೇ ಆತ್ಮಹತ್ಯೆಗಳ ವಿಷವರ್ತುಲದಿಂದ ಪಾರಾಗಲು ರೈತರಿಗೆ ಉಳಿದಿರುವ ಏಕೈಕ ಮಾರ್ಗ ಎಂಬುದು ಈ ರೈತ ಸಮಾವೇಶದಲ್ಲಿ ಮೂಡಿ ಬಂದ ಅಭಿಪ್ರಾಯ.

ಈ ಸಮಾವೇಶ ಬೇಡಿಕೆಗಳ ಉದ್ದುದ್ದ ಪಟ್ಟಿಯನ್ನು ಸರ್ಕಾರದ ಮುಂದೆ ಇಡಲಿಲ್ಲ. ರಸಗೊಬ್ಬರದ ಏರುತ್ತಿರುವ ಬೆಲೆಗಳನ್ನು ಇಳಿಸಿ ಎಂದು ಕೂಗು ಹಾಕಲಿಲ್ಲ. ಸಾಲ ಮನ್ನಾ ಮಾಡಿ ಎಂದು ಗೋಳಿಡಲಿಲ್ಲ, ಕೃಷಿಗೆ ಸಬ್ಸಿಡಿ ಕೊಡಿ ಎಂದು ಮನವಿ ಮಾಡಲೂ ಇಲ್ಲ.
ರೈತ ಸಮಾವೇಶ ಸರ್ಕಾರಗಳಿಗೆ ಮಾಡಿದ್ದು ಒಂದೇ ಒಂದು ಮನವಿ: ಗೋವು ಆಧಾರಿತ ಕೃಷಿ ಕೈಗೆತ್ತಿಕೊಳ್ಳಲು ರೈತರಿಗೆ ಸಂಪೂರ್ಣ ಬೆಂಬಲವಾಗಿ ನಿಲ್ಲಿ. ಅಷ್ಟು ಸಾಕು. ನಾವು ಸ್ವಾವಲಂಬಿಗಳಾಗಬಲ್ಲೆವು. ರಾಕೆಟ್, ವಿಮಾನ, ಕಂಪ್ಯೂಟರ್ ಇತ್ಯಾದಿ ಏನೇ ಸಂಶೋಧನೆ ಮಾಡದಿದ್ದರೂ ಜನ ಬದುಕಬಹುದು, ಆದರೆ ರೈತ ಆಹಾರ ಬೆಳೆಯದಿದ್ದರೆ ವಿಜ್ಞಾನಿಗಳೂ ಸೇರಿ ಸಮಾಜದಲ್ಲಿ ಯಾರೂ ಬದುಕಲು ಸಾಧ್ಯವಿಲ್ಲ.

ರಾಜ್ಯ ಪ್ರಶಸ್ತಿ ವಿಜೇತ ಗೋವು ಆಧಾರಿತ ಕೃಷಿಕ ರಮೇಶ ರಾಜು ಅವರು ದೇಶೀ ಗೋವುಗಳ ತಳಿಗಳನ್ನು ಆಧರಿಸಿ ಕೃಷಿಯನ್ನು ಹೇಗೆ ಸುಸ್ಥಿರಗೊಳಿಸಬಹುದು ಎಂಬುದನ್ನು ತಮ್ಮ ಅನುಭವದ ಆಧಾರದಲ್ಲೇ ವಿವರಿಸಿದ್ದು ವಿಶೇಷ. ರಾಜು ಅವರು ತಮ್ಮ 20 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿರುವುದು 10 ಎಕರೆಯಲ್ಲಿ ಮಾತ್ರ. ಅದಕ್ಕೆ ಅವರು ಬಳಸುತ್ತಿರುವ ನೀರು ಉಳಿದ ರೈತರು ಒಂದು ಎಕರೆಗೆ ಬಳಸುವಷ್ಟು ನೀರು ಅಷ್ಟೆ!. ಉತ್ಪಾದನೆ ಮಾತ್ರ ಇತರ ರೈತರು 10 ಎಕರೆಯಲ್ಲಿ ಗಳಿಸುವುದಕ್ಕಿಂತ ಹೆಚ್ಚು. ವೆಚ್ಚ ತುಂಬಾ ಕಡಿಮೆ. ಅವರು ಹೇಳುವಂತೆ ಇದು ಶೂನ್ಯ ಬಂಡವಾಳದ ಕೃಷಿಯೇ ಸರಿ.

ಆರಂಭದಲ್ಲಿ ರಮೇಶರಾಜು ಮತ್ತು ಅವರ ಜೊತೆಗೆ ಈ ಕೃಷಿ ಮಾಡುತ್ತಿದ್ದವರ ಸಂಖ್ಯೆ ಮಂಡ್ಯ ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಮಾತ್ರ. ಈಗ ಅವರ ದಾರಿಯಲ್ಲಿ ಸಾಗುತ್ತಿರುವ ಗೋವು ಆಧಾರಿತ ಕೃಷಿಕರ ದಂಡಿನ ಬಲ ಅಂದಾಜು 500ಕ್ಕೆ ಏರಿದೆ.

"ನಾವು ಅನುಸರಿಸುತ್ತಿರುವುದು ಸುಭಾಷ ಪಾಳೇಕರ್ ಅವರು ಬೋಧಿಸುತ್ತಾ ಬಂದಿರುವ ಜೀವಾಮೃತ ಕೃಷಿ ಪದ್ಧತಿ. 200 ಲೀಟರ್ ಡ್ರಂನಲ್ಲಿ 10 ಕಿಲೋ ಸಗಣಿ, 10 ಲೀಟರ್ ಗೋಮೂತ್ರ, ಎರಡು ಕಿಲೋ ಯಾವುದೇ ದ್ವಿದಳ ಧಾನ್ಯದ ಹುಡಿ, ಎರಡು ಕಿಲೋ ಕಪ್ಪು ಬೆಲ್ಲ ಮತ್ತು ಒಂದು ಮುಷ್ಠಿಯಷ್ಟು ನಮ್ಮ ಜಮೀನಿನ ಮಣ್ಣು ಹಾಗೂ ನೀರು. ದಿನಕ್ಕೆರಡು ಸಲ ಅದನ್ನು ಕದಡಿ, ಒಂದೆರಡು ದಿನದ ಬಳಿಕ ಏಳು ದಿನಗಳ ಒಳಗೆ ಅದನ್ನು ಬಳಸುತ್ತೇವೆ. ಇಷ್ಟು ಜೀವಾಮೃತ ಒಂದು ಎಕರೆ ಪ್ರದೇಶಕ್ಕೆ ಒಂದು ತಿಂಗಳಿಗೆ ಸಾಕು. ನಮ್ಮ ಭೂಮಿಗೆ ನಾವು ಹಾಕುವ ಗೊಬ್ಬರ ಇಷ್ಟೇ".

ಕಣ್ಣಿಗೆ ಕಾಣಿಸುವುದು ಇಷ್ಟೇ. ಆದರೆ ಇದರ ಪ್ರಭಾವ ಅಸಾಮಾನ್ಯ. ನಾಟಿ ಹಸುವಿನ ಮಹಾನತೆಯ ಅರಿವಾಗುವುದೂ ಇದರಿಂದಲೇ ಎನ್ನುತ್ತಾರೆ ರಮೇಶ ರಾಜು.

ನಮ್ಮ ವಿಜ್ಞಾನಿಗಳ ಪ್ರಕಾರ ಮಣ್ಣು ನಿರ್ಜೀವ. ಆದರೆ ವಾಸ್ತವವಾಗಿ ಮಣ್ಣು ನಿರ್ಜೀವ ಅಲ್ಲ, ಸಜೀವ. ಒಂದು ಗ್ರಾಮ್ ಮಣ್ಣಿನಲ್ಲಿ 100 ಕೋಟಿ ಸೂಕ್ಷ್ಮಜೀವಿಗಳಿವೆ. ಈ ಸೂಕ್ಷ್ಮಜೀವಿಗಳಿಗೆ ಪೂರಕವಾಗಿ ಇರುವುದು ನಾಟಿ ಹಸುವಿನ ಸಗಣಿ. ದೇಶೀ ಗೋವಿನ ಕರುಳು ಸೂಕ್ಷ್ಮಜೀವಿಗಳ ಸಾಗರ. ಈ ನಾಟಿ ಹಸುವಿನ ಒಂದು ಗ್ರಾಮ್ ಸಗಣಿಯಲ್ಲಿ 300ರಿಂದ 500 ಕೋಟಿ ಸೂಕ್ಷ್ಮ ಜೀವಿಗಳಿವೆ.

ಜೀವಾಮೃತ ಮಾಡುವಾಗ ಈ ಮಣ್ಣು ಮತ್ತು ಸಗಣಿಯ ಈ ಸೂಕ್ಷ್ಮಜೀವಿಗಳು ಪ್ರತಿ ಇಪ್ಪತ್ತು ನಿಮಿಷಕ್ಕೆ ದ್ವಿಗುಣಗೊಳ್ಳುತ್ತಾ ಬೆಳೆಯುತ್ತವೆ. ಹೀಗಾಗಿ ವಾರದೊಳಗೆ ಜೀವಾಮೃತದಲ್ಲಿ ಸೂಕ್ಷ್ಮಜೀವಿಗಳ ಮಹಾಸಾಗರವೇ ನಿರ್ಮಾಣವಾಗುತ್ತದೆ. ಈ ಸೂಕ್ಷ್ಮಜೀವಿಗಳ ಸಾಗರ ಭೂಮಿಗೆ ಇಳಿದು ಭೂಮಿ ಫಲವತ್ತಾಗುತ್ತದೆ.

ಆದರೆ ಇಂದು ಆಧುನಿಕ ಕೃಷಿಯ ಹೆಸರಿನಲ್ಲಿ ನಾವು ಈ ಗೋವು ಆಧಾರಿತ ಪಾರಂಪರಿಕ ಕೃಷಿ ಕೈಬಿಟ್ಟಿದ್ದೇವೆ. ರೈತರು ನಿರಂತರ ನಷ್ಟದಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಳ್ಳುವಂತಾಗಲು ಇದೇ ಮುಖ್ಯ ಕಾರಣ ಎಂಬುದು ಸಮಾವೇಶದ ವಿಶ್ಲೇಷಣೆ.

ಅದು ಹೇಗೆ?

ಗೋ ಆಧಾರಿತ ಕೃಷಿ ಮಾಡುತ್ತಿದ್ದ ನಮ್ಮ ಪೂರ್ವಜರು ಉಳುಮೆಗೆ ಎತ್ತುಗಳನ್ನು ಬಳಸುತ್ತಿದ್ದರು. ಬೀಜಗಳನ್ನು ಸ್ವತಃ ತಯಾರಿಸಿಕೊಳ್ಳುತ್ತಿದ್ದರು. ಗೊಬ್ಬರಕ್ಕೆ ಎತ್ತುಗಳು, ದನಗಳು ಹಾಕುವ ಸಗಣೆ, ಗೋಮೂತ್ರವನ್ನೇ ಬಳಸುತ್ತಿದ್ದರು. ಕೀಟಗಳ ಕಾಟಕ್ಕೆ ಗೋಮೂತ್ರ, ಬೇವು, ಮಜ್ಜಿಗೆ ಇತ್ಯಾದಿ ಮನೆಗಳಲ್ಲೇ ಲಭ್ಯವಿದ್ದ ವಸ್ತುಗಳನ್ನು ಬಳಸಿ ಕೀಟನಾಶಕ ತಯಾರಿಸಿಕೊಳ್ಳುತ್ತಿದ್ದರು.

ಹೀಗಾಗಿ ಕೃಷಿ ಸಂಪೂರ್ಣವಾಗಿ ಸುಸ್ಥಿರವೂ ಸ್ವಾವಲಂಬಿಯೂ, ಬಂಡವಾಳ ರಹಿತವೂ ಆಗಿತ್ತು. ಸಾಲ ಮಾಡುವ ಆವಶ್ಯಕತೆ ರೈತರಿಗೆ ಬರುತ್ತಿರಲಿಲ್ಲ. ಹಾಗಾಗಿ ಉತ್ತಮ ಬೆಲೆ ಬಂದಾಗ ಬೆಳೆದುದನ್ನು ಮಾರುತ್ತಿದ್ದರು. ಸಮಾಜದ ಜನ ರೈತರ ಸುತ್ತ ಸುತ್ತುವ ಸ್ಥಿತಿ ಇತ್ತು.

ಸ್ವಾತಂತ್ರ್ಯದ ಬಳಿಕ ಪ್ರಗತಿಪರ ಕೃಷಿ, ಹಸಿರು ಕ್ರಾಂತಿ, ಆಧುನಿಕ ಕೃಷಿಯ ಹೆಸರಿನಲ್ಲಿ ಉಳುಮೆಗೆ ಎತ್ತುಗಳ ಬದಲು ದುಬಾರಿ ಟ್ರ್ಯಾಕ್ಟರುಗಳನ್ನು ತರಲಾಯಿತು. ಅವುಗಳ ಖರೀದಿಗಾಗಿ ರೈತ ಮೊದಲ ಸಾಲ ಮಾಡಬೇಕಾಯಿತು. ನಂತರ ಅದರ ನಿರ್ವಹಣೆಗಾಗಿ ಪೆಟ್ರೋಲ್, ಡೀಸೆಲ್ ಇತ್ಯಾದಿ ವೆಚ್ಚ. ಅದಕ್ಕಾಗಿ ರೈತ ಹೊರಗಿನವರಿಗೆ ಹಣ ಕೊಡಬೇಕಾಗಿ ಬಂತು. ಆದರೆ ಎತ್ತುಗಳನ್ನು ಬಳಸುವಾಗ ಅವುಗಳಿಗೆ ಬೇಕಾದ ಹುಲ್ಲು ರೈತರಿಗೆ ಅವರ ಹೊಲಗಳಲ್ಲೇ ಲಭ್ಯವಿತ್ತು.

ಎತ್ತುಗಳು ನಿತ್ಯ ತಿಂದ ಆಹಾರಕ್ಕೆ ಪ್ರತಿಯಾಗಿ ಸಗಣಿ, ಗಂಜಲ ನೀಡುತ್ತಿದ್ದವು. ಇದರಿಂದ ಬೇಕಾದ ಗೊಬ್ಬರ ಮನೆಯಲ್ಲೇ ಉಚಿತವಾಗಿ ತಯಾರಾಗುತ್ತಿತ್ತು. ಸರಕು ಸಾಗಣೆಗೂ ಈ ಎತ್ತುಗಳೇ ಆಧಾರವಾಗಿದ್ದವು. ಟ್ರ್ಯಾಕ್ಟರುಗಳು ಸಗಣಿ, ಗಂಜಲ ನೀಡುವುದಿಲ್ಲ. ಹೀಗಾಗಿ ಗೊಬ್ಬರಕ್ಕೆ ಹೊರಗಿನ ಕಂಪೆನಿಗಳನ್ನೇ ಅವಲಂಬಿಸಬೇಕಾಯಿತು. ಬಣ್ಣ ಬಣ್ಣದ ಚೀಲಗಳಲ್ಲಿ ಕಂಪೆನಿಗಳು ಬಿಡುಗಡೆ ಮಾಡಿದ ರಾಸಾಯನಿಕ ಗೊಬ್ಬರಗಳು ದುಬಾರಿ, ಪುಕ್ಕಟೆ ಅಲ್ಲ. ಹೀಗಾಗಿ ಅವುಗಳ ಖರೀದಿಗಾಗಿ ರೈತ ಮತ್ತೆ ಸಾಲದ ಮೊರೆ ಹೋಗಬೇಕಾಯಿತು.

ನಾಟಿ ಬೀಜಗಳು ಹೆಚ್ಚು ಫಲ ನೀಡುವುದಿಲ್ಲ, ಹೈಬ್ರಿಡ್ ಬೀಜ ಬಳಸಿ ಎಂದು ರೈತರಿಗೆ ಬೋಧಿಸಲಾಯಿತು. ಬಹುಬೆಳೆ ಪದ್ಧತಿಯ ಬದಲು ಲಾಭದಾಯಕವಾದ ಏಕಬೆಳೆ ಬೆಳೆಯಲು ಪ್ರಚೋದಿಸಲಾಯಿತು. ರೈತರು ಮನೆಗಳಲ್ಲಿ ಉಚಿತವಾಗಿ ಬೀಜ ತಯಾರಿ ಮಾಡುವುದು ಬಿಟ್ಟು ಹೈಬ್ರಿಡ್ ಬೀಜಗಳಿಗಾಗಿ ಕಂಪೆನಿಗಳ ಮೊರೆ ಹೊಕ್ಕರು. ಇಲ್ಲಿಗೆ ರೈತರ ಮೂರನೇ ಪರಾವಲಂಬನೆ- ಮೂರನೇ ಸಾಲ ಅನಿವಾರ್ಯವಾಯಿತು.

ಗೋವಿನ ಅವಲಂಬನೆ ಕಡಿಮೆಯಾದ್ದರಿಂದ ಮನೆಗಳಲ್ಲಿ ಸ್ವತಃ ಉಚಿತವಾಗಿ ತಯಾರಿಸಲಾಗುತ್ತಿದ್ದ ಗೋಮೂತ್ರ, ಮಜ್ಜಿಗೆಯ ಕೀಟನಾಶಕ ಕಾಣೆಯಾಯಿತು. ಕೀಟಗಳ ನಿವಾರಣೆಗಾಗಿ ಮತ್ತೆ ಕಂಪೆನಿಗಳೇ ಬಿಡುಗಡೆ ಮಾಡುವ ಕೀಟನಾಶಕಗಳಿಗೆ ರೈತರು ಮೊರೆ ಹೋಗಬೇಕಾಯಿತು. ಅಲ್ಲಿಗೆ ಅವರ ಮೇಲೆ ನಾಲ್ಕನೇ ಸಾಲದ ಹೊರೆ ಬಿತ್ತು.

ಕ್ಷೀರಕ್ರಾಂತಿಯ ಹೆಸರಿನಲ್ಲಿ ದೇಶೀ ಗೋವುಗಳ ಸ್ಥಳಕ್ಕೆ ವಿದೇಶೀ ಹಸುಗಳು ಬಂದವು. ಅವುಗಳ ಗಂಡು ಕರುಗಳು ಮೊದಲೇ ನಿತ್ರಾಣ. ಜೊತೆಗೆ ಉಳುಮೆಗೆ ಬೇಕಿಲ್ಲವಾದ್ದರಿಂದ ಅವುಗಳನ್ನು ಕಸಾಯಿಖಾನೆಗೆ ಮಾರುವ ಪರಿಪಾಠ ಶುರುವಾಯಿತು. ಹೀಗೆ ರೈತರ ಮನೆಯಿಂದ ಗೋ ಸಂತತಿ ಅವಸಾನದತ್ತ ಸಾಗಿತು.

ಇವೆಲ್ಲದರ ಪರಿಣಾಮ ರೈತರು ಸ್ವಾವಲಂಬನೆ ಬಿಟ್ಟು ಸಂಪೂರ್ಣವಾಗಿ ಕಂಪೆನಿಗಳ ಅಡಿಯಾಳುಗಳಾದರು. ಟ್ರ್ಯಾಕ್ಟರ್, ಅವುಗಳಿಗೆ ಇಂಧನ, ಬೀಜ, ಗೊಬ್ಬರ ಹೀಗೆ ಎಲ್ಲಕ್ಕೂ ಪರಾವಲಂಬನೆ ಮಾಡಬೇಕಾಗಿ ಬಂದ ಕಾರಣ ಎಲ್ಲಕ್ಕೂ ಸಾಲ ಮಾಡುವುದು ಅನಿವಾರ್ಯವಾಯಿತು. ಸ್ವಾವಲಂಬಿಯಾಗಿದ್ದ ರೈತ ಸಾಲದ ಕೂಪದಲ್ಲಿ ಬಿದ್ದ, ಬಡ್ಡಿ ನೀಡಲು ಹೆಣಗಾಡಿದ. ಸಾಲಗಾರರು ಹಿಂದೆ ಬಿದ್ದಾಗ ಬೆಳೆದದ್ದನ್ನು ಅವಸರದಲ್ಲಿ ಮಾರಲು ಹೊರಟ. ಬೆಳೆಗೆ ಸೂಕ್ತ ಬೆಲೆ ಸಿಗದೇ ಹೋದಾಗ ಅದನ್ನು ವಾಪಸ್ ತರಲೂ ಕಾಸಿಲ್ಲದೆ ರಸ್ತೆಯಲ್ಲಿ ಸುರಿದ. ಚಿಂತಿತನಾಗಿ ಮನೆಗೆ ಬಂದ ಅವನಿಗೆ ಸಮಸ್ಯೆಗಳಿಂದ ಮುಕ್ತನಾಗಲು ಕಂಡ ದಾರಿ ಅದೇ ಕಂಪೆನಿಗಳು ಮಾರಿದ್ದ ಕೀಟನಾಶಕಗಳು. ಕುಡಿದು ಆತ್ಮಹತ್ಯೆ ಮಾಡಿಕೊಂಡ.

ಕಂಪೆನಿಗಳು ನೀಡುವ ರಸಗೊಬ್ಬರ, ಕೀಟನಾಶಕಗಳೆಲ್ಲ ಒಂದು ರೀತಿಯ ಪ್ರಚೋದಕಗಳು ಇದ್ದಂತೆ ಮಾತ್ರ. ಹಿರಿಯರು ನೂರಾರು ವರ್ಷಗಳಿಂದ ಸಗಣಿ, ಗೋಮೂತ್ರ ಬಳಸಿ ಕೃಷಿ ಮಾಡಿದ್ದರಿಂದ ಫಲವತ್ತಾಗಿದ್ದ ಭೂಮಿ, ಈ ಪ್ರಚೋದಕಗಳ ಪರಿಣಾಮವಾಗಿ ಬಂಪರ್ ಬೆಳೆ ನೀಡಿತು. ಆದರೆ ಭೂಮಿಯಲ್ಲಿ ಸ್ವಯಂ ಸತ್ವ ಇಲ್ಲದೆ ಇದ್ದರೆ ಕೇವಲ ಪ್ರಚೋದಕಗಳು ಏನು ಮಾಡಿಯಾವು? ಕಂಪೆನಿಗಳು ನೀಡಿದ ಕೀಟನಾಶಕಗಳಿಂದ ಭೂಮಿಯಲ್ಲಿದ್ದ ಸೂಕ್ಷ್ಮಜೀವಿಗಳು ಅಳಿದು ಭೂಮಿ ಬರಡಾಯಿತು. ಹೀಗಾಗಿ ಈಗ ಎಷ್ಟು ರಸಗೊಬ್ಬರ ಸುರಿದರೂ ಉತ್ಪನ್ನ ಸೊನ್ನೆ.

ಇಂತಹ ಪರಿಸ್ಥಿತಿಯಲ್ಲಿ ಯಾವ ಸರ್ಕಾರಗಳೂ ರೈತನನ್ನು ಪಾರು ಮಾಡಲು ಸಾಧ್ಯವೇ ಇಲ್ಲ. ರೈತರನ್ನು ಮತ್ತೆ ಗೋ ಆಧಾರಿತ ಕೃಷಿಯತ್ತ ತೊಡಗಿಸುವುದೊಂದೇ ದಾರಿ. ಸರ್ಕಾರಗಳೆಲ್ಲವೂ ಇದಕ್ಕೆ ಬೆಂಬಲವಾಗಿ ನಿಲ್ಲಬೇಕು- ಇದು ರಮೇಶರಾಜು ಕಳಕಳಿಯ ಮನವಿ.

ದೇಶೀ ತಳಿಯ ಗೋವುಗಳೇ ಏಕೆ? ವಿದೇಶೀ ತಳಿಗಳ ಗೊಬ್ಬರ ಆಗದೇ ಎಂಬ ಪ್ರಶ್ನೆ ಸಮಾವೇಶದಲ್ಲಿ ಮೂಡಿಬಂತು. ವಿದೇಶೀ ತಳಿಗಳ ಸಗಣಿಯಲ್ಲಿ ಸೂಕ್ಷ್ಮ ಜೀವಿಗಳ ಸಂಖ್ಯೆ ಬಹಳ ಕಡಿಮೆ. ಅವುಗಳ ಗರ್ಭಧಾರಣೆ, ಸಾಕಣೆಗೆ ಕೂಡಾ ಅನೈಸರ್ಗಿಕ ಕ್ರಮ ಅನುಸರಿಸುವುದರಿಂದ, ಅವುಗಳ ಸಗಣಿಯಲ್ಲಿ ಇರುವ ಸೂಕ್ಷ್ಮಜೀವಿಗಳು ಕೂಡಾ ಸಹಜ ಸ್ವಭಾವ ಕಳೆದುಕೊಂಡು ಪ್ರತಿಕೂಲ ಪರಿಣಾಮವನ್ನೇ ಬೀರುತ್ತವೆ ಎಂಬುದು ರಮೇಶರಾಜು ವಿವರಣೆ.

ಸಮಾವೇಶದಲ್ಲಿ ಪಾಲ್ಗೊಂಡ ಮಾಜಿ ಸಚಿವ ಆರ್. ಅಶೋಕ ಅವರೂ ದೇಶೀ ಗೋ ತಳಿಗಳ ಸಂರಕ್ಷಣೆಗೆ ಒತ್ತು ನೀಡಿದರು. ಹಿಂದೆ ಗೋವುಗಳ ಸಂಖ್ಯೆಯ ಆಧಾರದಲ್ಲಿ ವ್ಯಕ್ತಿಗಳ ಪ್ರತಿಷ್ಠೆ ಲೆಕ್ಕ ಹಾಕಲಾಗುತ್ತಿತ್ತು. ಈಗ ಗೋವು ಇದ್ದರೆ ಅಂತಹ ಮನೆಗೆ ಹೆಣ್ಣು ಕೊಡುವುದಿಲ್ಲ ಎಂದು ಹೇಳುವ ಪರಿಸ್ಥಿತಿ ಬಂದಿದೆ ಎಂಬುದು ಅವರ ವಿಷಾದ.

ನಮಗೆ ರಸಗೊಬ್ಬರದ ರುಚಿ ಹತ್ತಿಸಿದ ವಿದೇಶಗಳು ಎಚ್ಚೆತ್ತುಕೊಂಡಿವೆ. ಸಾವಯವ ಮಳಿಗೆಗಳನ್ನೇ ತೆರೆದು ಪ್ರೋತ್ಸಾಹ ನೀಡುತ್ತಿವೆ ಎನ್ನುವ ಅಶೋಕ ಅವರಂತಹವರು ರಾಜಕಾರಣಿಗಳ ವಲಯದಲ್ಲಿ ಈ ವಿಚಾರವಾಗಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯ ಇದೆ.

ಇಲ್ಲಿ ಇನ್ನೊಂದು ವಿಶೇಷವೂ ಇದೆ. ದೇಶೀ ಗೋವುಗಳ ಸಂರಕ್ಷಣೆಗಾಗಿ ಸ್ಥಾಪಿಸಲಾದ ಈ ಗೋಲೋಕದ ನಿರ್ಮಾಣಕ್ಕೆ ಕೋಲ್ಕತ್ತದ ಉದ್ಯಮಿಗಳ ದಂಡು ನೆರವು ನೀಡಿದೆ. ಇಲ್ಲಿ ನಡೆದ ಸಮರ್ಪಣ ಕಾರ್ಯಕ್ರಮದಲ್ಲಿ ಸ್ವತಃ ಈ ಉದ್ಯಮಿಗಳ ದಂಡು ಕೂಡಾ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರಗು ನೀಡಿತ್ತು. ಈ ಉದ್ಯಮಿಗಳ ನೆರವಿನಿಂದಾಗಿಯೇ ಈ ಗೋಲೋಕದಲ್ಲಿ ಈಗ 26 ದೇಶೀ ತಳಿಗಳ 300ಕ್ಕೂ ಹೆಚ್ಚು ಹಸುಗಳನ್ನು 4 ಗೋಶಾಲೆಗಳಲ್ಲಿ ಸಂರಕ್ಷಿಸಲಾಗುತ್ತಿದೆ.

ಗೋಲೋಕದ ರೈತ ಸಮಾವೇಶವು ನೀಡಿದ ಗೋ ಆಧಾರಿತ ಕೃಷಿಯತ್ತ ಸಾಗಬೇಕೆಂಬ ಮಹತ್ವದ ಸಂದೇಶವು ಸರ್ಕಾರಗಳ ಕಣ್ಣು ತೆರೆಸುವುದೇ?

CHUCHHU ಚುಚ್ಚು..

CHUCHHU ಚುಚ್ಚು..

by : Prakash Shetty

cour'tesy: Vartha Bharathi

Wednesday, February 27, 2008

In the memory of Chandra Shekhar Azad

Mr. Chandra Shekhar Azad, the first revolutionary of India who fought for the independence of the nation with weapons against oppressive British, committed 'Atma Balidan' on this day of 27 February 1931. He declared himself as Azad means 'Free' and remained free until his death.

ನಾನು 'ಆಜಾದ್': ಹೀಗೆ ಆತ ಘೋಷಿಸಿದ್ದ...!

ಹದಿನೈದನೆಯ ವಯಸ್ಸಿನಲ್ಲಿ ಪೊಲೀಸರಿಗೆ ಸೆರೆಸಿಕ್ಕಿದ ಹೊತ್ತಿನಲ್ಲಿ ತನ್ನನ್ನು ತಾನು 'ಆಜಾದ್' ಎಂಬುದಾಗಿ ಘೋಷಿಸಿಕೊಂಡ ಚಂದ್ರಶೇಖರ ಮುಂದೆಂದೂ ಬ್ರಿಟಿಷರ ಕೈವಶವಾಗಲೇ ಇಲ್ಲ. ಕ್ರಾಂತಿಕಾರಿ ಹೋರಾಟದ ದಾರಿಯಲ್ಲಿ ತನ್ನ ಗೆಳೆಯರೊಂದಿಗೆ ಭಾರತಮಾತೆಯ ಬಂಧಮುಕ್ತಿಗಾಗಿ ಶಸ್ತ್ರ ಹಿಡಿದು ಸಾಗಿದ. ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾದ!

ನೆತ್ರಕೆರೆ ಉದಯಶಂಕರ

ಆಗ ಆ ಬಾಲಕನಿಗೆ ಕೇವಲ ಹದಿನೈದು ವರ್ಷ. ಪೊಲೀಸರು ಬಂಧಿಸಿ ಮ್ಯಾಜಿಸ್ಟ್ರೇಟರ ಎದುರು ನಿಲ್ಲಿಸಿದ್ದರು.

ಮ್ಯಾಜಿಸ್ಟ್ರೇಟರು ಕೇಳಿದರು: ನಿನ್ನ ಹೆಸರೇನು?

ಆ ಬಾಲಕ ಉತ್ತರಿಸಿದ: ಆಜಾದ್. ಉರ್ದುವಿನಲ್ಲಿ ಆಜಾದ್ ಎಂದರೆ 'ಸ್ವತಂತ್ರ' ಎಂದು ಅರ್ಥ.

ಮ್ಯಾಜಿಸ್ಟ್ರೇಟರು ಮತ್ತೆ ಮತ್ತೆ ಪ್ರಶ್ನಿಸಿದಾಗಲೂ ಆ ಬಾಲಕನಿಂದ ಪುನಃ ಪುನಃ ಮಾರ್ದನಿಸಿದ ಉತ್ತರ ಅದೇ ' ಮೈ ಆಜಾದ್ ಹೂಂ!'

ಈ ಉತ್ತರ ಕೊಟ್ಟದ್ದಕ್ಕೆ ಸಿಟ್ಟಿಗೆದ್ದ ಮ್ಯಾಜಿಸ್ಟ್ರೇಟರು ಆ ಪುಟ್ಟ ಬಾಲಕನಿಗೆ ಕೊಟ್ಟ ಶಿಕ್ಷೆ 16 ಛಡಿ ಏಟುಗಳು!

ಸೆರೆಮನೆಯೊಳಗೆ ಆತನಿಗೆ ಒಂದೊಂದು ಛಡಿ ಏಟು ಬೀಳುವಾಗಲೂ ಆತನಿಂದ ಹೊರಹೊಮ್ಮುತ್ತಿದ್ದ ಘೋಷಣೆ: ಭಾರತ ಮಾತಾ ಕೀ ಜಯ್ ಮತ್ತು ಮಹಾತ್ಮ ಗಾಂಧಿ ಕೀ ಜಯ್!

ಅಂದು ತನ್ನನ್ನು 'ಆಜಾದ್' ಎಂಬುದಾಗಿ ಘೋಷಿಸಿಕೊಂಡ ಆತ ತನ್ನ ಅಂತಿಮ ಕ್ಷಣದವರೆಗೂ ಸ್ವತಂತ್ರನಾಗಿಯೇ ಉಳಿದ. ಒಂದು ಹಂತದಲ್ಲಿ ಪೊಲೀಸರ ಬಂಧನಕ್ಕೆ ಒಳಗಾಗುವ ಸಂದರ್ಭ ಬಂದಾಗ, ತನ್ನ ಜೊತೆಗಿದ್ದವರನ್ನೆಲ್ಲ ಪಾರು ಮಾಡಿ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಾಹುತಿ ಮಾಡಿಕೊಂಡ!

ನೆನಪಿಡಬೇಕು. ಈ ಬಾಲಕ ಇಷ್ಟೆಲ್ಲ ಮಾಡಿದ್ದು: ಭಯೋತ್ಪಾದನೆಗಾಗಿ ಅಲ್ಲ, ಭಾರತ ಮಾತೆಯ ಸ್ವಾತಂತ್ರ್ಯಕ್ಕಾಗಿ.ಈತ ಮಾತೆಯ ಬಂಧಮುಕ್ತಿಗಾಗಿ ತನ್ನನ್ನು ತಾನು ಬಲಿದಾನ ಮಾಡಿಕೊಂಡ ಪವಿತ್ರ ದಿನ ಇಂದು. ಫೆಬ್ರುವರಿ 27.

ಈ ವ್ಯಕ್ತಿಯೇ ಚಂದ್ರಶೇಖರ ಆಜಾದ್!

ಭಾರತದಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ಆರಂಭವಾದಾಗ ಶ್ರೀಸಾಮಾನ್ಯನೊಬ್ಬ ಅವರೊಂದಿಗೆ ಹೋರಾಡಲು ಬಂದೂಕು ಕೈಗೆತ್ತಿಕೊಂಡು, ಗೆಳೆಯರ ಬಳಗ ಕಟ್ಟಿಕೊಂಡು ಹಲವಾರು ಸಂಘಟನೆಗಳನ್ನೂ ಹುಟ್ಟುಹಾಕಿ ಕ್ರಾಂತಿಕಾರಿ ಹೋರಾಟಕ್ಕೆ ನಾಂದಿ ಹಾಡಿದ ಮೊತ್ತ ಮೊದಲನೆಯ ವ್ಯಕ್ತಿ.

ಮಧ್ಯ ಪ್ರದೇಶದ ಜಬುವಾ ಜಿಲ್ಲೆಯ ಭುವ್ರಾದಲ್ಲಿ ಪಂಡಿತ ಸೀತಾರಾಮ ತಿವಾರಿ ಮತ್ತು ಜಗರಾಣಿ ದೇವಿ ಅವರ ಪುತ್ರನಾಗಿ 1906ರ ಜುಲೈ 26ರಂದು ಜನಿಸಿದ ಚಂದ್ರಶೇಖರ ಕಟ್ಟಾ ಬ್ರಾಹ್ಮಣ, ಹನುಮಂತನ ಮಹಾಭಕ್ತ. ಪಂಡಿತಜಿ ಎಂದೇ ಹೆಸರಾಗಿದ್ದ ಚಂದ್ರಶೇಖರ, ಕ್ರಾಂತಿಕಾರಿಗಳಾಗಿ ಖ್ಯಾತರಾದ ಭಗತ್ ಸಿಂಗ್, ಸುಖ್ ದೇವ್, ರಾಜಗುರು, ಬಟುಕೇಶ್ವರದತ್, ರಾಮ ಪ್ರಸಾದ ಬಿಸ್ಮಿಲ್, ಅಸ್ಫಾಖ್ಉಲ್ಲಾ ಖಾನ್ ಇವರನ್ನೆಲ್ಲ ರೂಪಿಸಿದ ಗುರು.

ಕಟ್ಟಾ ಬ್ರಾಹ್ಮಣನಾಗಿದ್ದ ಆಜಾದ್ ಇತರಿಗಾಗಿ ಹೋರಾಡಬೇಕಾದ್ದು ತನ್ನ ಧರ್ಮ ಎಂಬುದಾಗಿ ನಂಬಿ ಅದಕ್ಕಾಗಿ ಬಾಳಿ ಬದುಕಿದ ಮಹಾನ್ ವ್ಯಕ್ತಿ.

1919ರಲ್ಲಿ ಪಂಜಾಬಿನ ಜಲಿಯನ್ ವಾಲಾ ಬಾಗಿನಲ್ಲಿ ಬ್ರಿಟಿಷರು ಶಸ್ತ್ರರಹಿತರಾಗಿದ್ದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಗುಂಡಿನ ಮಳೆಗರೆದು ಮಾರಣಹೋಮ ನಡೆಸಿದ ಘಟನೆ ಚಂದ್ರಶೇಖರನ ರಕ್ತ ಕುದಿಸಿತು. ಮಹಾತ್ಮಾ ಗಾಂಧೀಜಿ ಅಸಹಕಾರ ಚಳವಳಿಯ ಹಾದಿಗೆ ಇಳಿದರೆ, ಚಂದ್ರಶೇಖರ ಆಜಾದ್ ಬ್ರಿಟಿಷರ ವಿರುದ್ಧ ಶಸ್ತ್ರ ಕೈಗೆತ್ತಿಕೊಳ್ಳುವ ಸಂಕಲ್ಪ ಮಾಡಿದ. ಹೀಗೆ ಕೈಗೆತ್ತಿಕೊಂಡ ಶಸ್ತ್ರವನ್ನು ಕೊನೆಯ ಕ್ಷಣದವರೆಗೂ ಚಂದ್ರಶೇಖರ ಬಿಡಲೇ ಇಲ್ಲ.

1926ರಲ್ಲಿ ನಡೆದ ಕಾಕೋರಿ ರೈಲು ದರೋಡೆ, ಅದೇ ವರ್ಷ ವೈಸ್ರಾಯ್ ತೆರಳುತ್ತಿದ್ದ ರೈಲುಗಾಡಿ ಸ್ಫೋಟ ಯತ್ನ, ಬ್ರಿಟಿಷ್ ಪೊಲೀಸರ ಹಲ್ಲೆಯ ಪರಿಣಾಮವಾಗಿ ಮೃತರಾದ ಲಾಲಾ ಲಜಪತರಾಯ್ ಅವರ ಅವರ ಸಾವಿನ ಸೇಡು ತೀರಿಸಲು 1928ರಲ್ಲಿ ಲಾಹೋರಿನಲ್ಲಿ ಸ್ಯಾಂಡರ್ಸ್ ಮೇಲೆ ಗುಂಡು ಹಾರಿಸಿದ ಘಟನೆ ಇವೆಲ್ಲದರಲ್ಲೂ ಚಂದ್ರಶೇಖರ್ ಕೈವಾಡವಿತ್ತು. ಬ್ರಿಟಿಷರ ವಿರುದ್ಧ ಹೋರಾಟಕ್ಕಾಗಿ ಹಿಂದುಸ್ಥಾನ್ ರಿಪಬ್ಲಿಕನ್ ಅಸೋಸಿಯೇಶನ್ ಹುಟ್ಟು ಹಾಕಿದ ಆಜಾದ್, ನೌಜವಾನ್ ಭಾರತ್ ಸಭಾ, ಕಿಸಾನ್ ಪಾರ್ಟಿಗಳಲ್ಲೂ ಸಕ್ರಿಯನಾಗಿದ್ದ.

ಹದಿನೈದನೆಯ ವಯಸ್ಸಿನಲ್ಲಿ ಪೊಲೀಸರಿಗೆ ಸೆರೆಸಿಕ್ಕಿದ ಹೊತ್ತಿನಲ್ಲಿ ತನ್ನನ್ನು ತಾನು 'ಆಜಾದ್' ಎಂಬುದಾಗಿ ಘೋಷಿಸಿಕೊಂಡ ಚಂದ್ರಶೇಖರ ಮುಂದೆಂದೂ ಬ್ರಿಟಿಷರ ಕೈವಶವಾಗಲೇ ಇಲ್ಲ. ಕ್ರಾಂತಿಕಾರಿ ಹೋರಾಟದ ದಾರಿಯಲ್ಲಿ ತನ್ನ ಗೆಳೆಯರೊಂದಿಗೆ ಭಾರತಮಾತೆಯ ಬಂಧಮುಕ್ತಿಗಾಗಿ ಶಸ್ತ್ರ ಹಿಡಿದು ಸಾಗಿದ. ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾದ!

1931ರ ಫೆಬ್ರುವರಿ 27. ಆಜಾದ್ ಪಾಲಿನ ಕೆಟ್ಟ ದಿನ. ಜೀವಂತವಾಗಿಯಾದರೂ ಸರಿ, ಮೃತದೇಹದ ರೂಪದಲ್ಲಾದರೂ ಸರಿ ಚಂದ್ರಶೇಖರನನ್ನು ಸೆರೆ ಹಿಡಿಯಲೇ ಬೇಕೆಂದು ಬಯಸಿದ್ದ ಬ್ರಿಟಿಷರ ಪಾಲಿಗೆ ಸುದಿನ. ತನ್ನ ಇಬ್ಬರು ಕ್ರಾಂತಿಕಾರಿ ಗೆಳೆಯರ ಜೊತೆಗೆ ಉತ್ತರ ಪ್ರದೇಶದ ಅಲಹಾಬಾದಿನ ಅಲ್ಫ್ರೆಡ್ ಪಾರ್ಕಿನಲ್ಲಿ ಚಂದ್ರಶೇಖರ ಆಜಾದ್ ಇರುವ ವಿಚಾರ ಬ್ರಿಟಿಷ್ ಪೊಲೀಸರಿಗೆ ಗೊತ್ತಾಯಿತು. ಜೊತೆಗೇ ಇದ್ದ ಮಿತ್ರದ್ರೋಹಿಯೊಬ್ಬ ಬ್ರಿಟಿಷರಿಗೆ ಆಜಾದ್ ಇದ್ದ ತಾಣದ ಸುಳಿವನ್ನು ಬ್ರಿಟಿಷರಿಗೆ ನೀಡಿದ್ದ.

ಪಾರ್ಕಿಗೆ ಮುತ್ತಿಗೆ ಹಾಕಿದ ಪೊಲೀಸರು ಶರಣಾಗತರಾಗುವಂತೆ ಆಜಾದ್ ಮತ್ತು ಗೆಳೆಯರಿಗೆ ಆಜ್ಞಾಪಿಸಿದರು. ಆದರೆ ಚಂದ್ರಶೇಖರ ಜಗ್ಗಲಿಲ್ಲ. ಬ್ರಿಟಿಷರ ವಿರುದ್ಧ ಹೋರಾಡುತ್ತಾ ಇಬ್ಬರು ಮಿತ್ರರನ್ನು ಪಾರು ಮಾಡಿ ಬ್ರಿಟಿಷರಿಗೆ ಸಿಗದಂತೆ ತಪ್ಪಿಸಿದ. ಕೊನೆಯವರೆಗೂ ಬ್ರಿಟಿಷರ ವಿರುದ್ಧ ತಾನೊಬ್ಬನೇ ಧೀರೋಧಾತ್ತ ಹೋರಾಟ ನಡೆಸಿದ. ಇನ್ನೇನು ಕಟ್ಟ ಕಡೆಯ ಗುಂಡು ಉಳಿದಿದೆ ಎಂದು ಖಚಿತವಾದಾಗ ತನಗೆ ತಾನೇ ಗುಂಡು ಹಾರಿಸಿಕೊಂಡ.

ತನ್ನ ಹೆಸರು 'ಆಜಾದ್' ಎಂಬುದಾಗಿ ಘೋಷಿಸಿ ಬ್ರಿಟಿಷರ ಎದೆ ಗುಂಡಿಗೆ ನಡುಗಿಸಿದ್ದ ಚಂದ್ರಶೇಖರ ಕಡೆಗೂ ಬ್ರಿಟಿಷರಿಗೆ ಸೆರೆ ಸಿಕ್ಕದೆ ಸ್ವತಂತ್ರನಾಗಿಯೇ ಸಾವನ್ನಪ್ಪುವ ಮೂಲಕ ತನ್ನ ಹೆಸರು, ಘೋಷಣೆಯನ್ನು ಅಮರವಾಗಿಸಿದ.

ಇಂತಹ ಮಹಾನ್ ಹೋರಾಟಗಾರನ ಬಲಿದಾನದ ಮಹಾ ಪವಿತ್ರ ದಿನ ಇಂದು. ಭಯೋತ್ಪಾದನೆಯ ಭೀಕರ ಕರಿನೆರಳಿನಲ್ಲಿ ನಲುಗುತ್ತಿರುವ ಭಾರತೀಯರು ಇಂತಹ ಅಮರ ಕ್ರಾಂತಿಕಾರಿಗಳನ್ನು ಕ್ಷಣ ಹೊತ್ತಾದರೂ ಸ್ಮರಿಸಿ, ಅವರಿಂದ ಸ್ವಾತಂತ್ರ್ಯ ರಕ್ಷಣೆಯ ಕಾರ್ಯಕ್ಕೆ ಪ್ರೇರಣೆ ಪಡೆದುಕೊಳ್ಳಬೇಕಾದ ಸುದಿನ.

ಅಂತಹ ಸ್ಮರಣೀಯ ಕಾರ್ಯಕ್ಕೆ ಕಟಿಬದ್ಧರಾಗೋಣವೇ?

(Picture cour'tesy: www.answers.com)

CHUCHHU ಚುಚ್ಚು..

CHUCHHU ಚುಚ್ಚು..

by : Prakash Shetty

cour'tesy: Vartha Bharathi

Monday, February 25, 2008

Sunday, February 24, 2008

Global Warming: Will Kangaroo help Cows?

Australian scientists recently claimed that some special bacteria in the stomach of Kangaroo, national animal of their nation, cuts the methane content and they believe that by transferring these bacteria to Cows and Sheep, 14 percent of the harmful emissions released from them could be eliminated. This may be helpful to reduce the global warming, but won't it further disturb the natural living of Cows and Sheep? PARYAYA continues its discussion on Cow and Global Warming..

ಗೋವಿನ ಮಿಥೇನಿಗೆ ಕಾಂಗರೂ ಮದ್ದು?

ಆಸ್ಟ್ರೇಲಿಯಾದ ವಿಜ್ಞಾನಿಗಳು ಗೋವುಗಳ ಜಠರದಿಂದ ಹೊರಬರುವ ಮಿಥೇನ್ ನಿವಾರಣೆಗೆ ಕಾಂಗರೂಗಳ ಜಠರದ ಬ್ಯಾಕ್ಟೀರಿಯಾ ಸೇರ್ಪಡೆ ಮದ್ದು ಎಂದು ಹೇಳುತ್ತಿದ್ದಾರೆ. ಇಂತಹ ಪ್ರಯೋಗದಿಂದ ಗೋವುಗಳ ಶೋಷಣೆಗೆ ಇನ್ನೊಂದು ಕಾಣಿಕೆ ಕೊಟ್ಟಂತಾಗಲಾರದೇ?

ನೆತ್ರಕೆರೆ ಉದಯಶಂಕರ

ಜಾಗತಿಕ ತಾಪಮಾನದ ಬಿಸಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಿಸರ್ಗದ ಮೇಲೆ, ನದಿಗಳ ಮೇಲೆ, ಜೀವಿಗಳ ಬದುಕಿನ ವ್ಯವಸ್ಥೆಯ ಮೇಲೆ ಘೋರ ಪರಿಣಾಮಗಳಾಗುತ್ತಿವೆ. ನಿಸರ್ಗ ನಿಯಮಗಳಿಗೆ ವಿರುದ್ಧವಾದ ಮಾನವನ ಅತಿ ಚಟುವಟಿಕೆಗಳಿಂದಲೇ ಜಾಗತಿಕ ತಾಪಮಾನ ಏರುತ್ತಿದ್ದರೂ ಮನುಷ್ಯ ಇವುಗಳ ಹೊಣೆಗಾರಿಕೆಯನ್ನು ಗೋವಿನಂತಹ ಬಡಪಾಯಿ ಪ್ರಾಣಿಗಳ ಮೇಲೆ ಜಾರಿಸುವ ಜಾಯಮಾನ ಮಾತ್ರ ಬಿಟ್ಟಿಲ್ಲ.

ಗೋವಿನ ಜಠರದಿಂದ ಹೊರಬರುವ ಮಿಥೇನ್ ವಿಶ್ವದಲ್ಲಿ ಜಾಗತಿಕ ತಾಪಮಾನ ಏರಿಕೆಗೆ ಭಾರಿ ಕಾಣಿಕೆ ಕೊಡುತ್ತಿದೆ ಎಂಬುದು ಬಹುದೊಡ್ಡ ಆರೋಪ. ಈ ಮಿಥೇನನ್ನು ಸೂಕ್ತರೀತಿಯಲ್ಲಿ ಬಳಸಿಕೊಂಡರೆ ಪರಿಸರಕ್ಕೆ ಹಾನಿಕರವಾಗದ ರೀತಿಯಲ್ಲಿ ಬಹುಜನರಿಗೆ ಬೇಕಾದ ಇಂಧನ ಪಡೆಯಬಹುದು ಎಂಬುದು ಗೊತ್ತಿದ್ದರೂ, ಈ ಮಿಥೇನ್ ಸಮಸ್ಯೆಯನ್ನು ಭೂತಾಕಾರವಾಗಿ ಮಾಡುತ್ತಿರುವುದಂತೂ ಹೌದು.

ಅಂದಮೇಲೆ ಗೋವಿನ ಜಠರದಲ್ಲಿ ಈ ಮಿಥೇನ್ ಉತ್ಪಾದನೆ ಆಗುವುದನ್ನೇ ಕಡಿಮೆ ಮಾಡಿದರೆ ಹೇಗೆ ಎಂಬ ಚಿಂತನೆಯೂ ವಿಜ್ಞಾನಿಗಳ ತಲೆಗೆ ಹೊಕ್ಕಿದೆ. ಈ ನಿಟ್ಟಿನಲ್ಲಿ ಹಲವು ವಿಜ್ಞಾನಿಗಳು ಸಂಶೋಧನೆ ನಿರತರೂ ಆಗಿದ್ದಾರೆ.

ಗೋವುಗಳ ಜಠರದಲ್ಲಿ ಮಿಥೇನ್ ಉತ್ಪಾದನೆಯನ್ನೇ ಕಡಿಮೆಗೊಳಿಸುವ ಉಪಾಯವನ್ನು ತಾವು ಕಂಡು ಹಿಡಿದಿರುವುದಾಗಿ ಇತ್ತೀಚೆಗೆ ಆಸ್ಟ್ರೇಲಿಯಾದ ವಿಜ್ಞಾನಿಗಳು ಬಹಿರಂಗ ಪಡಿಸಿದ್ದಾರೆ.

ಗೋವುಗಳ ಜಠರದಿಂದ ಹೊರಬರುವ ಶೇಕಡಾ 14 ರಷ್ಟು ಮಿಥೇನನ್ನು ಕಡಿಮೆಗೊಳಿಸುವ ಮದ್ದು ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿಯಾದ ಕಾಂಗರೂ ಹೊಟ್ಟೆಯಲ್ಲಿದೆ ಎಂಬುದೇ ಅವರ ಸಂಶೋಧನೆ.

ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಸರ್ಕಾರದ ಹಿರಿಯ ಸಂಶೋಧನಾ ವಿಜ್ಞಾನಿ ಅಥೋಲ್ ಕ್ಲೀವ್ ಅವರ ಪ್ರಕಾರ ಕಾಂಗರೂವಿನ ಜಠರದಲ್ಲಿರುವ ವಿಶೇಷ ಬ್ಯಾಕ್ಟೀರಿಯಾಗಳನ್ನು ಗೋವುಗಳು ಮತ್ತು ಕುರಿಗಳ ಜಠರಕ್ಕೆ ಸೇರಿಸಿದರೆ, ಈ ಗೋವು ಮತ್ತು ಕುರಿಗಳ ಜಠರದಿಂದ ಬರುವ ಮಿಥೇನನ್ನು ಶೂನ್ಯ ಮಟ್ಟಕ್ಕೆ ಇಳಿಸಬಹುದಂತೆ.

'ದಿ ಏಜ್' ಪತ್ರಿಕೆಯು, ಸಂಶೋಧಕ ಅಥೋಲ್ ಕ್ಲೀವ್ ಅವರನ್ನು ಉಲ್ಲೇಖಿಸಿ ಈ ಸಂಶೋಧನೆ ಕುರಿತು ಇತ್ತೀಚೆಗೆ ವರದಿ ಮಾಡಿತ್ತು. ಕಾಂಗರೂ ಜಠರದ ಈ ವಿಶೇಷ ಬ್ಯಾಕ್ಟೀರಿಯಾಗಳು ದನಗಳ ಜೀರ್ಣಾಂಗ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿ ಮಾಡುವ ಮೂಲಕ ಅವುಗಳಿಗೆ ನೀಡಬೇಕಾದ ಆಹಾರದ ಮೇಲಿನ ಲಕ್ಷಾಂತರ ರೂಪಾಯಿ ವೆಚ್ಚವನ್ನು ಇಳಿಸುತ್ತವೆ ಎಂಬುದು ಈ ವಿಜ್ಞಾನಿಯ ಹೇಳಿಕೆ.

ಕಾಂಗರೂ ಜಠರದ ವಿಶೇಷ ಬ್ಯಾಕ್ಟೀರಿಯಾಗಳ ಸೇರ್ಪಡೆಯಿಂದ ಗೋವುಗಳು ಮತ್ತು ಕುರಿಗಳು ಮಿಥೇನ್ ಉತ್ಪಾದನೆ ನಿಲ್ಲಿಸುವುದು ಮಾತ್ರವೇ ಅಲ್ಲ, ತಾವು ತಿನ್ನುವ ತಿನಸಿನಿಂದ ಶೇಕಡಾ 10ರಿಂದ 15ರಷ್ಟು ಅಧಿಕ ಶಕ್ತಿಯನ್ನೂ ಪಡೆಯುತ್ತವೆ ಎಂಬುದೂ ಕ್ಲೀವ್ ಉವಾಚ.

ಆಸ್ಟ್ರೇಲಿಯಾದ ರೈತರಿಗೆ ಈ 'ಪರಿಹಾರ' ಇದೀಗ ಅಪ್ಯಾಯಮಾನವಾಗಿ ಕಂಡಿದೆಯಂತೆ. ಸಾಕಣೆ ವೆಚ್ಚ ಕಡಿಮೆ ಆಗುವುದರ ಜೊತೆಗೆ ಜಾಗತಿಕ ತಾಪಮಾನ ಏರಿಕೆಯ ಆರೋಪದಿಂದಲೂ 'ಗೋವು'ಗಳು ಬಚಾವಾಗುತ್ತವಲ್ಲ! ಅವರಿಗೆ ಈ ಸಂಶೋಧನೆ ಇನ್ನಷ್ಟು ಅಪ್ಯಾಯಮಾನ ಎನ್ನಿಸಲು ಇನ್ನೊಂದು ಕಾರಣ: ಜಾಗತಿಕ ತಾಪಮಾನ ಏರಿಕೆಯಿಂದಾಗಿ ಆಸ್ಟ್ರೇಲಿಯಾದಲ್ಲಿ ಹೆಚ್ಚುತ್ತಿರುವ ಬರಗಾಲ.

ಏನಿದ್ದರೂ ಸಂಶೋಧಕರ ಪ್ರಕಾರ ಕಾಂಗರೂ ಜಠರದಲ್ಲಿರುವ ಈ ವಿಶೇಷ ಬ್ಯಾಕ್ಟೀರಿಯಾಗಳನ್ನು ಪ್ರತ್ಯೇಕಿಸಲು ಇನ್ನೂ ಕನಿಷ್ಠ ಮೂರು ವರ್ಷ ಬೇಕು. ಆ ಬಳಿಕವಷ್ಟೇ ಅವುಗಳನ್ನು ಗೋವುಗಳು ಮತ್ತು ಕುರಿಗಳ ಜಠರಕ್ಕೆ ವರ್ಗಾಯಿಸುವ ಕೆಲಸ ಮಾಡಬಹುದು.

ಬಹುಷ: ಆಸ್ಟ್ರೇಲಿಯಾದ ಜನಕ್ಕೆ ಮಾತ್ರವೇ ಅಲ್ಲ, ಜಗತ್ತಿನ ಇತರೆಡೆಗಳಲ್ಲೂ ಈ 'ಸಂಶೋಧನೆ'ಗೆ ಬೆಂಬಲ ವ್ಯಕ್ತವಾಗಬಹುದೇನೋ?

ಆದರೆ ಇದು ನಿಸರ್ಗದತ್ತ ಪ್ರಕ್ರಿಯೆಗೆ ವಿರುದ್ಧವಾದ ಇನ್ನೊಂದು ಕ್ರಿಯೆ ಆಗಲಾರದೇ ಎಂಬುದು ಯೋಚಿಸಬೇಕಾದ ಪ್ರಶ್ನೆ.

ಈಗಾಗಲೇ ಗೋವುಗಳನ್ನು ನಾವು 'ಹಾಲಿನ ಯಂತ್ರ'ಗಳನ್ನಾಗಿ ಮಾಡಿಕೊಂಡಿದ್ದೇವೆ. ಸಹಜವಾಗಿ ಜನಿಸುವ, ಸಹಜವಾಗಿ ಬೆಳೆಯುವ, ಸಹಜವಾಗಿ ಸಾಯುವ ಹಕ್ಕುಗಳನ್ನು ಅವುಗಳಿಂದ ಕಿತ್ತುಕೊಂಡಿದ್ದೇವೆ.

ಗೋಮಾಳದಲ್ಲಿ ಅಡ್ಡಾಡುತ್ತಾ ತಮಗಿಷ್ಟವಾದ ಹುಲ್ಲು ತಿನ್ನುವ ಸ್ವಾತಂತ್ರ್ಯವನ್ನು ಗೋವುಗಳಿಗೆ ನಿರಾಕರಿಸಿದ್ದೇವೆ. ಹೆಚ್ಚು ಹಾಲು ಕೊಡುವಂತಾಗಲಿ ಎಂದು ಗರ್ಭ ಧರಿಸಲು ಸಂಕರ ತಳಿಗಳ ಇಂಜೆಕ್ಷನ್ ನೀಡುತ್ತಿದ್ದೇವೆ. ನೈಸರ್ಗಿಕ ಆಹಾರದ ಬದಲು ಕೃತಕವಾಗಿ ಸೃಷ್ಟಿಸುವ ಪಶು ಆಹಾರಗಳನ್ನು ನೀಡುತ್ತಿದ್ದೇವೆ.

ಇಷ್ಟೆಲ್ಲ ಆದ ಮೇಲೂ ಇವುಗಳ ಸಾಕಣೆವೆಚ್ಚ ದುಬಾರಿ ಎಂಬ ಚಿಂತೆ ನಮ್ಮನ್ನು ಕಾಡುತ್ತಿತ್ತು. ಇದಕ್ಕೆ ಒಂದು ಪರಿಹಾರ ಸಿಕ್ಕಿಬಿಟ್ಟರೆ, ಮಾನವನಷ್ಟು ಖುಷಿ ಪಡುವ ಇನ್ನೊಂದು 'ಪ್ರಾಣಿ' ಈ ಜಗತ್ತಿನಲ್ಲಿ ಇರಲಾರದೇನೋ?

ಆಸ್ಟ್ರೇಲಿಯಾದ ವಿಜ್ಞಾನಿಗಳು ಈಗ ಇದಕ್ಕೂ ಪರಿಹಾರ ಕಂಡು ಹಿಡಿದಂತಾಗಿದೆ! ಆದರೆ ಒಂದು ಪ್ರಾಣಿಯ ಜಠರದ ಬ್ಯಾಕ್ಟೀರಿಯಾಗಳನ್ನು ಇನ್ನೊಂದು ಪ್ರಾಣಿಯ ಜಠರಕ್ಕೆ ಸೇರಿಸುವುದರಿಂದ ಆಗಬಹುದಾದ ಅಡ್ಡ ಪರಿಣಾಮ ಏನು ಎಂಬುದರ ಅರಿವು ನಮಗಿಲ್ಲ!

ಕಾಡು ಮೇಡಿನಲ್ಲಿ ಅಲೆದು ಹುಲ್ಲು, ಸೊಪ್ಪುಸದೆ ತಿಂದು ಬರುತ್ತಿದ್ದ ಗೋವುಗಳ ಹಾಲು ಪುಷ್ಟಿಕರ ಮಾತ್ರವೇ ಅಲ್ಲ, ಮೂತ್ರ ಮತ್ತು ಸೆಗಣಿ ಕೂಡಾ ಔಷಧೀಯವಾಗಿಯೂ, ಉತ್ತಮ ಗೊಬ್ಬರವಾಗಿಯೂ ಮಾನವನಿಗೆ ಅತ್ಯಂತ ಹೆಚ್ಚು ಉಪಯುಕ್ತವಾಗಿ ಇರುತ್ತಿದ್ದವು.

ಈಗ ಗೋವುಗಳ 'ಮೆಲುಕಾಟ'ಕ್ಕೆ ಮಂಗಳ ಹಾಡಬಹುದಾದ, ಜಠರದ ಸ್ವರೂಪವನ್ನೇ ಬದಲಿಸಬಹುದಾದ ಇಂತಹ 'ಪ್ರಯೋಗ'ದ ಬಳಿಕವೂ ನಮಗೆ ಇಂತಹ ಪುಷ್ಟಿಕರ ಹಾಲು, ಔಷಧಿ ಹಾಗೂ ಉತ್ತಮ ಪೋಷಕಾಂಶಯುಕ್ತ ಗೋಮೂತ್ರ, ಸೆಗಣಿ ಲಭಿಸಬಹುದೇ?

ಮೆಲುಕಾಡುವ ಗೋವುಗಳ ಜಠರದಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ಸೂಕ್ಷ್ಮಜೀವಿಗಳಿದ್ದು, ಸೆಗಣಿಯ ಮೂಲಕ ಅವುಗಳನ್ನು ಪಡೆದು ರೈತರು ಸ್ವಾವಲಂಬಿ ಕೃಷಿ ಮಾಡಬಹುದು. ಗೋವಿನ ಜಠರದ ಸ್ವರೂಪ ಬದಲಾದರೆ, ಸೆಗಣಿ, ಗೋಮೂತ್ರ ಆಧಾರಿತವಾದ ರೈತರ ಸ್ವಾವಲಂಬಿ ಕೃಷಿಗೆ ಪೆಟ್ಟು ಬೀಳಲಾರದೇ?

ಗೋವುಗಳಿಂದ ಬರುವ ಮಿಥೇನ್ ಸ್ಥಗಿತಗೊಂಡರೆ ನಿಸರ್ಗದತ್ತ ಪರ್ಯಾಯ ಇಂಧನದ ಮೂಲವೊಂದನ್ನು ನಾವೇ ಕೈಯಾರೆ ಕಿತ್ತುಕೊಂಡಂತೆ ಆಗದೇ?

ಎಲ್ಲಕ್ಕಿಂತ ಹೆಚ್ಚಾಗಿ ಮಾನವರ ಶೋಷಣೆಯಿಂದ ನರಳುತ್ತಿರುವ ಗೋವುಗಳ ಶೋಷಣೆ ಇನ್ನಷ್ಟು ಪರಾಕಾಷ್ಠೆಗೆ ಏರಲಾರದೇ?

ಈ ಪ್ರಶ್ನೆಗಳಿಗೆ ಉತ್ತರ ಕೊಡುವವರು ಯಾರು?

CHUCHHU ಚುಚ್ಚು..

CHUCHHU ಚುಚ್ಚು..

by : Prakash Shetty


cour'tesy: Vartha Bharathi

Saturday, February 23, 2008

Thursday, February 21, 2008

CHUCHHU ಚುಚ್ಚು..

CHUCHHU ಚುಚ್ಚು..

by : Prakash Shetty


cour'tesy: Vartha Bharathi

Consumer Awareness: L.P.G. Cylinder

Almost everyone will observe the negligence during transportation of L.P.G. Cylinders to homes or hotels. Throwing the cylinders from the van to the roads is very common. If some cracks developed while throwing them who will responsible for the possible dangers? Karnataka State Consumers Court, Bangalore has ruled that such attitude is punishable under Consumer Protection Act.

ದಢ ದಢನೆ ಉರುಳುವ

ಎಲ್.ಪಿ. ಜಿ ಸಿಲಿಂಡರ್..!


ಅಡುಗೆ ಅನಿಲ ವ್ಯಾಪಾರದಲ್ಲಿ ಇಂತಹ ಸೇವಾಲೋಪ ಮರುಕಳಿಸದಂತೆ ನೋಡಿಕೊಳ್ಳುವುದೇ ಈ ತೀರ್ಪಿನ ಉದ್ದೇಶ ಎಂದು ಸ್ಪಷ್ಟ ಪಡಿಸಿದ ನ್ಯಾಯಾಲಯವು ಗ್ರಾಹಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ಅಡುಗೆ ಅನಿಲ ಸರಬರಾಜುದಾರರಿಗೂ ಸೂಚಿಸುವಂತೆಯೂ ಪ್ರತಿವಾದಿಗಳಿಗೆ ನಿರ್ದೇಶಿಸಿತು.

ನೆತ್ರಕೆರೆ ಉದಯಶಂಕರ

ಅಡುಗೆ ಅನಿಲದ ಸಿಲಿಂಡರುಗಳನ್ನು ದಢದಢನೆ ಕೆಳಕ್ಕೆ ಎಸೆಯುವುದು, ಕಾಲಕಾಲಕ್ಕೆ ಅದರ ಪರೀಕ್ಷೆ ಮಾಡಿಸದೇ ಇರುವುದು ಅನಿಲ ಸರಬರಾಜುದಾರರ ಪಾಲಿನ ಸೇವಾ ನ್ಯೂನತೆ ಆಗುತ್ತದೆ ಎಂಬುದು ನಿಮಗೆ ಗೊತ್ತೇ?

ಅಡುಗೆ ಅನಿಲ ನಿಮ್ಮ ಮನೆಗೆ ಬರುವ ರೀತಿಯನ್ನು ಗಮನಿಸಿದ್ದೀರಾ? ಅಡುಗೆ ಅನಿಲ ಸಿಲಿಂಡರುಗಳನ್ನು ವಾಹನದಿಂದ ಇಳಿಸುವಾಗ ದಢದಢನೆ ಕೆಳಕ್ಕೆ ಎಸೆಯುವ ಪರಿಯನ್ನು ಗಮನಿಸಿದ್ದೀರಾ?

ಈ ರೀತಿ ಎಸೆಯಲ್ಪಡುವ ಅಡುಗೆ ಅನಿಲದ ಸಿಲಿಂಡರಿನಲ್ಲಿ ಎಲ್ಲಾದರೂ ಬಿರುಕು ಉಂಟಾಗಿ ಸೋರಿಕೆ ಸಂಭವಿಸಿದರೆ, ಇಂತಹ ಸಿಲಿಂಡರುಗಳನ್ನು ಕಾಲಕಾಲಕ್ಕೆ ಪರೀಕ್ಷಿಸದೇ ಇದ್ದರೆ ಸೇವಾ ಲೋಪವಾಗುತ್ತದೆ. ಗ್ರಾಹಕ ಸಂರಕ್ಷಣಾ ಕಾಯ್ದೆ ನಿಮ್ಮ ನೆರವಿಗೆ ಬರುತ್ತದೆ.

ತನ್ನ ಮುಂದೆ ಬಂದ ಇಂತಹ ಪ್ರಕರಣವೊಂದರ ಮೇಲ್ಮನವಿಯ ವಿಚಾರಣೆ ನಡೆಸಿದ ಕರ್ನಾಟಕ ರಾಜ್ಯ ಗ್ರಾಹಕ ನ್ಯಾಯಾಲಯವು ಗ್ರಾಹಕರೊಬ್ಬರಿಗೆ ನ್ಯಾಯ ಒದಗಿಸಿದೆ.

ಈ ಪ್ರಕರಣದ ಅರ್ಜಿದಾರರು: ಬೆಂಗಳೂರು ಶಾಂತಿನಗರದ ಬಿ.ಪಿ. ಸುರೇಶರಾವ್ ಅವರ ಪತ್ನಿ ಕೆ.ಎನ್. ಯಶೋದಾ. ಪ್ರತಿವಾದಿಗಳು: (1) ಕಾರ್ತೀಕ್ ಏಜೆನ್ಸೀಸ್, ವಿ.ವಿ. ಪುರಂ ಬೆಂಗಳೂರು ಮತ್ತು (2) ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್, ಮಹದೇವಪುರ ಪೋಸ್ಟ್ ಬೆಂಗಳೂರು.

ಅರ್ಜಿದಾರರಾದ ಯಶೋದಾ ಅವರು ತಮಗೆ ಸರಬರಾಜು ಮಾಡಲಾಗಿದ್ದ ಅಡುಗೆ ಅನಿಲ ಸಿಲಿಂಡರಿನಲ್ಲಿ ಅನಿಲ ಸೋರಿಕೆ ಆಗುತ್ತಿರುವುದನ್ನು 30-5-2005ರಂದು ಸಂಜೆ 4 ಗಂಟೆಗೆ ಗಮನಿಸಿದರು. ತತ್ಕ್ಷಣವೇ ತಮ್ಮ ಪ್ರದೇಶದ ಪೊಲೀಸ್ ಠಾಣೆಗೆ ಪ್ರತಿವಾದಿ ಸರಬರಾಜುದಾರರ ವಿರುದ್ಧ ದೂರು ನೀಡಿದರು.

ಗಮನಿಸದೇ ಹೋಗಿದ್ದರೆ ಈ ಅನಿಲ ಸೋರಿಕೆಯಿಂದ ಜೀವ ಹಾಗೂ ಆಸ್ತಿಪಾಸ್ತಿಗೆ ಆಗಬಹುದಾಗಿದ್ದ ಅಪಾರ ಹಾನಿ ಬಗ್ಗೆ ಪ್ರತಿವಾದಿ ಸರಬರಾಜುದಾರರ ಗಮನವನ್ನೂ ಸೆಳೆದರು. ಆದರೆ ಪ್ರತಿವಾದಿಗಳು ಅದನ್ನು ನಿರ್ಲಕ್ಷಿಸಿದರು.

ಯಶೋದಾ ಅವರು ಸರಬರಾಜುದಾರರಿಂದ ಸೇವಾಲೋಪ ಆಗಿದೆ ಎಂದು ಆಪಾದಿಸಿ, ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದರು.ಆದರೆ ಪ್ರತಿವಾದಿಗಳ ಆಕ್ಷೇಪವನ್ನು ಪುರಸ್ಕರಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯವು ಯಶೋದಾ ಅವರ ದೂರನ್ನು ತಳ್ಳಿಹಾಕಿತು.

ಯಶೋದಾ ಅವರು ಈ ತೀರ್ಪಿನ ವಿರುದ್ಧ ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು. ಅಧ್ಯಕ್ಷ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಸದಸ್ಯರಾದ ಎಂ. ಶಾಮ ಭಟ್ ಅವರನ್ನು ಒಳಗೊಂಡ ಪೀಠವು ಅರ್ಜಿದಾರರ ಪರ ವಕೀಲ ಕೆ.ಆರ್. ಅನಂತಮೂರ್ತಿ ಮತ್ತು ಪ್ರತಿವಾದಿಗಳ ಪರ ವಕೀಲರಾದ ಎ. ರಾಮಮೋಹನ್ ಮತ್ತು ಬಿ.ಕೆ. ಶ್ರೀಧರ್ ಅವರಿಂದ ಅಹವಾಲುಗಳನ್ನು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.

ಅರ್ಜಿದಾರರ ನಿರ್ಲಕ್ಷ್ಯದ ಪರಿಣಾಮವಾಗಿಯೇ ಸಿಲಿಂಡರಿಗೆ ಹಾನಿಯಾಗಿ ಅನಿಲ ಸೋರಿಕೆ ಆಗಿದೆ ಎಂದು ಪ್ರತಿವಾದಿಗಳು ವಾದಿಸಿದರು. ಆದರೆ ಅದನ್ನು ಸಮರ್ಥಿಸುವಂತಹ ಯಾವುದೇ ಪುರಾವೆಯನ್ನೂ ಅವರು ಸಲ್ಲಿಸಲಿಲ್ಲ ಎಂಬುದನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿತು.

ಸೋರಿಕೆ ಆರೋಪಕ್ಕೆ ಗುರಿಯಾದ ಅಡುಗೆ ಅನಿಲದ ಸಿಲಿಂಡರನ್ನು ಚೆನ್ನೈಯ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ದಕ್ಷಿಣ ಪ್ರಾದೇಶಿಕ ಕಚೇರಿಯ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರ ವರದಿಯು ಸಿಲಿಂಡರಿನ ತಳಭಾಗದ ರಿಂಗಿನ ಒಳಗೆ ಅನಿಲ ಸೋರಿಕೆ ಕಂಡು ಬಂದಿದೆ ಎಂದು ವರದಿ ನೀಡಿದ್ದುದನ್ನೂ ನ್ಯಾಯಾಲಯ ಗಮನಿಸಿತು.

ಸಿಲಿಂಡರಿನಿಂದ ಅನಿಲ ಸೋರಿಕೆ ಆಗಿಲ್ಲ ಎಂದುಕೊಂಡರೂ, ಸರಬರಾಜುದಾರರು ಸರಬರಾಜು ಮಾಡಲಾದ ಸಿಲಿಂಡರನ್ನು ಸ್ಫೋಟಕಗಳ ಮುಖ್ಯ ನಿಯಂತ್ರಣಾಧಿಕಾರಿಗಳು ನಿಗದಿ ಪಡಿಸಿದ ನಿಯಮಗಳಿಗೆ ಅನುಗುಣವಾಗಿ ಪರೀಕ್ಷೆ ಮಾಡಿಸಿದ್ದಾರೆಯೇ ಎಂಬ ಅಂಶವನ್ನು ನ್ಯಾಯಾಲಯ ಪರಿಶೀಲಿಸಿತು.

ಈ ಪ್ರಕರಣದಲ್ಲಿ ಬ್ಯೂರೋ ಆಫ್ ಸ್ಟ್ಯಾಂಡರ್ಡ್ಸ್ ಅಗತ್ಯ ಪರೀಕ್ಷೆ ನಡೆಸಿ ವರದಿ ಕೊಟ್ಟಿತ್ತು. ಅದರ ಪ್ರಕಾರ ಸಿಲಿಂಡರನ್ನು 2002ರ ಕೊನೆಯ ನಾಲ್ಕು ತಿಂಗಳುಗಳ ಒಳಗೆ ಮರು ಪರೀಕ್ಷೆ ಮಾಡಿಸಬೇಕಾಗಿತ್ತು. ಆದರೆ ಆ ರೀತಿ ಮರು ಪರೀಕ್ಷೆ ಮಾಡದೆಯೇ ಸಿಲಿಂಡರನ್ನು ನಿರಂತರವಾಗಿ ಬಳಸುತ್ತಾ ಬರಲಾಗಿದೆ ಎಂಬುದು ಸಿಲಿಂಡರಿನಲ್ಲಿ ಮಾಡಲಾಗಿರುವ ಮೊಹರಿನಿಂದ ಸ್ಪಷ್ಟವಾಗುತ್ತದೆ ಎಂದು ಈ ವರದಿ ಹೇಳಿದ್ದು ನ್ಯಾಯಾಲಯದ ಗಮನಕ್ಕೆ ಬಂತು.

ಬಳಕೆದಾರರ ಸುರಕ್ಷತೆಯ ಸಲುವಾಗಿ ಕಾಲಕಾಲಕ್ಕೆ ನಡೆಸಬೇಕಾಗಿದ್ದ ಇಂತಹ ಸಿಲಿಂಡರ್ ಮರುಪರೀಕ್ಷೆಯನ್ನು ನಡೆಸದೇ ಇದ್ದುದು ಸೇವಾಲೋಪ ಆಗುತ್ತದೆ ಎಂಬ ತೀರ್ಮಾನಕ್ಕೆ ನ್ಯಾಯಾಲಯ ಬಂದಿತು.

ಈ ಹಿನ್ನೆಲೆಯಲ್ಲಿ ಮೇಲ್ಮನವಿಯನ್ನು ಅಂಗೀಕರಿಸಿದ ನ್ಯಾಯಾಲಯವು 25,000 ರೂಪಾಯಿಗಳ ಪರಿಹಾರವನ್ನು 2 ತಿಂಗಳ ಒಳಗಾಗಿ ಅರ್ಜಿದಾರರಿಗೆ ಪಾವತಿ ಮಾಡುವಂತೆ ಪ್ರತಿವಾದಿ ಅನಿಲ ಸರಬರಾಜುದಾರರಿಗೆ ಆಜ್ಞಾಪಿಸಿತು.

ನಿಗದಿತ ಸಮಯದ ಒಳಗಾಗಿ ಪರಿಹಾರ ಪಾವತಿಗೆ ತಪ್ಪಿದಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ದಿನಾಂಕದಿಂದಲೇ ಅನ್ವಯವಾಗುವಂತೆ ಪಾವತಿ ಮಾಡುವವರೆಗೂ ಶೇಕಡಾ 6ರಷ್ಟು ಬಡ್ಡಿಯನ್ನೂ ತೆರಬೇಕು ಎಂದೂ ಪೀಠ ಆದೇಶಿಸಿತು.

ಅಡುಗೆ ಅನಿಲ ವ್ಯಾಪಾರದಲ್ಲಿ ಇಂತಹ ಸೇವಾಲೋಪ ಮರುಕಳಿಸದಂತೆ ನೋಡಿಕೊಳ್ಳುವುದೇ ಈ ತೀರ್ಪಿನ ಉದ್ದೇಶ ಎಂದು ಸ್ಪಷ್ಟ ಪಡಿಸಿದ ನ್ಯಾಯಾಲಯವು ಗ್ರಾಹಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ಅಡುಗೆ ಅನಿಲ ಸರಬರಾಜುದಾರರಿಗೂ ಸೂಚಿಸುವಂತೆಯೂ ಪ್ರತಿವಾದಿಗಳಿಗೆ ನಿರ್ದೇಶಿಸಿತು.

CHUCHHU ಚುಚ್ಚು..

CHUCHHU ಚುಚ್ಚು..

by : Prakash Shetty



cour'tesy: Vartha Bharathi

Tuesday, February 19, 2008

HARVESTING RAIN ON CAMPUS

College saves lakhs of

rupees on water



Rain Water Harvesting is need of the hour. For our future generation we must seriously think and act on it. PARYAYA presents the wonderful story on the "Magic Pond', Go through it...

Shree Padre

A 3-acre pond dug in the Yenepoya Medical College 15 kms from Mangalore is catching run-off from about 15 acres of the campus and from an equal area of their neighbourhood. It has already saved the institution a substantial sum on borewell costs.

The Dakshina Kannada district of Karnataka enjoys highest rainfall in the State. Its annual average of 4000 mms makes 1.6 lakh liters per acre. Yet, this medical college that has a sprawling campus of 33 acres had to bring water from outside for 8 months a year! Though they were using their own tankers to bring water, monthly expenditure came to around 6 lakh rupees.

This is the story of Yenepoya Medical and Dental College at Deralakatte, 15 kilometres away from Mangalore. Deralakatte, Konaje and Mudipu, adjoining areas on laterite hilltops, have in the recent past attracted many big institutions - Mangalore University, three medical colleges and Navodaya residential high School. Buildings, inhabitations and floating population have suddenly jumped high. Groundwater use has increased multifold. Water scarcity has turned serious. Very shortly, an complex for the software-major Infosys is to come up here on hundreds of acres of land.

Thankfully, a massive and project of catching rain, foremost in this area, has been implemented at Yenepoya. A 3-acre pond dug at the lowest elevation was completed before the 2007 monsoon. This pond catches run-off from about 15 acres of the campus and from an equal area of their neighbourhood. It has a capacity to hold 3 crore litres of rain. " Just a week after the onset of monsoon, this started overflowing", recalls Narayana Bhat, Yenepoya's project manager.

Adds he, "When we bought the land in way back 1995, a small stream was flowing upto March. I remember washing my face with its crystal clear water." P K Thampi, consultant of this project, a retired geologist from Trivandrum selected this spot for the rain pond construction. On the lower elevation of the pond, a huge embankment - bund - is built using soil. To cut-off the seepage, A LDPE sheet, 500 gsm (grams per square meter) was inserted into the deep trench dug in the middle of the bund. It touches the hard rock layer below. The erosion-prone sloppy portions of the pond are protected by a lining of coir geo-textiles.

Interestingly, water is not pumped directly from the pond. In the middle, there was an old open well, 35 feet in depth. It is retained there. Though the stored rainwater is a little reddish in the beginning, the well water, well filtered by the soil around remained crystal clear.

The campus has two Colleges - Medical and Dental, hospitals and hostels. Student strength is 1000. Two yielding bore wells provide about 10,000 litres an hour each. The yield comes down in the summer. Daily fresh water requirement comes to 4 lakh litres.

This would have gone double but for the water reuse being done in a big way. The campus has two sewage treatment plants. Since its inception in 1999, all the used water from hostels, quarters etc is treated and pumped back. Total daily output from two plants is about 4 lakh litres. This is used for irrigation and toilet flushing. As such, fresh water is seldom required for these purposes.

Apart from these, an areca plantation, important cash crop of the district, is coming up using this treated water. "We use only the manure produced in the treatment plants and nothing else", points out horticulture assistance Vasanth, "it appears as if it provides all the required nutrients."

This year, for the first time, they could give nearly half a year rest for the bore wells. For the first time in the last 9 years, they weren't used from the monsoon onset up to November 15. Outsourcing of water was delayed by 7 weeks. (The rain pond still has some water and the open well is now yielding only about 60,000 litres a day.)

But there is a practical problem. The open well is at a higher position than the deeper portions of this pond. As there is bed rock at the bottom of the open well, it can't be easily deepened. "I am going to suggest a deeper extraction well at the deepest part of the pond", says P K Thampi, "so that it can not only extract the water in the tank but the water seeping from the sides."

The new earthen bund's height decreases after about a year. This is due to seasoning and compacting of the lose soil. Next year, this will be raised by another one meter by giving an additional LDPE sheet and putting more soil on the top of the bund. That would store one crore litres more water. These two steps would considerably increase the availability of water.

According to Thampi, "once the pond is stabilized it should support their total water demand up to the end of March in 2009."

What's this stabilisation? "Since we dig deep for the pond in summer," explains he, "existing water from all the four sides flows into that. The water table in that area would be considerably lowered. Next year, once the pond fills up, outflow starts in a similar way. The water table would increase." One more hydrological cycle - that's two monsoons - is needed for the pond to stabilize, says Thampi. In summer, apart from the stored rainwater, there will be inflow into the pond. "As such, with such rain ponds you get two way benefits - the storage and recharge. The situation may further improve, if there are some summer showers," he notes.

Constructed at a cost of Rs.25 lakhs, by delaying bringing outside water for seven weeks, the pond has already paid back 10 lakh rupees. By next year, it is hoped to return the full expenditure. Hopes Bhat, "In another 2 to 3 years, we would be self-sufficient in water." But there is one area yet to be addressed. Day today water consumption goes on without restraint.

Yenepoya, a pioneer in water reuse and rain water harvesting would do better by starting a planned awareness campaign to sensitise its students, staff and visitors about water conservation. As a part of this, an audio-visual on it's efforts in these fields and the existing water scarcity outside the campus could be screened. Water saving devices need to be encouraged. Students' prospectus, brochures and other campus literatures can carry these messages effectively.

Each incoming batch of students may be taken around and made to understand the importance of water. This move, in the long run would not only help the institution, but the society at large too as it is producing future doctors whose advice will always carry weight.

Increase in pumping groundwater is depleting this belt of its aquifers very fast. Manjanady, an ordinary village just 5 kilometers away is just one example. For the last three years, this village has had to supply with tanker water. The danger light of drought has already on. Unfortunately, most of the people are blind or conveniently pretend so towards it.

Yenepoya offers a sustainable model of solution for the water crisis, especially for large campuses, housing colonies and factories which have a spacious watershed that drives good amount of its run-off to a common point.

The nearby K S Hegde Medical Academy (KSHEMA) and PA College of Engineering have reportedly started reusing water after purification. It's high time the big institutions in this area start addressing the water scarcity in a sustainable way. "There is solution to suit any condition, but they have to be site-specific," points out Thampi.

Contact: Narayana Bhat,
Project Manager
Yenepoya Medical and Dental CollegeDeralakatte,
Mangalore 575 018
Phone: (0824) 220 4668 to 70,

e-mail: narayan_bhat2006@yahoo.com

CHUCHHU ಚುಚ್ಚು..

CHUCHHU ಚುಚ್ಚು..

by : Prakash Shetty


cour'tesy: Vartha Bharathi

Monday, February 18, 2008

Saturday, February 16, 2008

Surya Namaskaa 'Yajna' for health !

The Sun , personification of energy and vitality was made the source of inspiration by our Rishis and thus the concept of Surya Namaskara was born. Reported benefits of Surya Namaskara are immense like loosening spine, relief from backache and muscular tension, correcting the bad posture and maintaining Balance. It also helps blood circulation and digestion which in turn improves quality of sleep. Satsanga Foundation of Kalyananagar, Bangalore is trying to popularize it by organizing Mass Surya Namaskara programmes.

ಸೂರ್ಯ ನಮಸ್ಕಾರ 'ಯಜ್ಞ'...!

ಕಲ್ಯಾಣ ನಗರದ ಸಿ.ಎಂ.ಆರ್. ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಫೆಬ್ರುವರಿ 17ರ ಭಾನುವಾರ ಮುಂಜಾನೆ 6.30 ಗಂಟೆಗೆ 'ನೂರೆಂಟು ಸೂರ್ಯ ನಮಸ್ಕಾರ'ಕ್ಕಾಗಿ ನೂರಾರು ಮಂದಿ ಸಜ್ಜಾಗುತ್ತಿದ್ದಾರೆ. ಇದು ಆರೋಗ್ಯವೃದ್ಧಿಗಾಗಿ. ನೀವೂ ಪಾಲ್ಗೊಳ್ಳಬಹುದು.

ನೆತ್ರಕೆರೆ ಉದಯಶಂಕರ

ಬಸ್ಸಿನಲ್ಲಿ ಹೋದರೂ ಅಷ್ಟೇ, ಸ್ಕೂಟರ್ - ಬೈಕಿನಲ್ಲಿ ಹೋದರೂ ಅಷ್ಟೆ. ಗಮ್ಯ ಮುಟ್ಟುವಷ್ಟರಲ್ಲಿ ಸೊಂಟನೋವು, ಸುಸ್ತು. ಸಾಕಪ್ಪಾ ಸಾಕು ಎಂಬ ಅನುಭವ. ಹದಗೆಟ್ಟ ರಸ್ತೆ, ಟ್ರಾಫಿಕ್ ಜಾಮ್, ಧೂಳು, ಹೊಗೆ- ನಿಮ್ಮನ್ನು ಇಂತಹ ಪರಿಸ್ಥಿತಿಗೆ ತಂದು ಬಿಡುತ್ತದೆ.

ಕೈತುಂಬ ಸಂಬಳ ತರುವ ಐಟಿ, ಬಿಟಿ ಉದ್ಯೋಗವಾದರೂ ಅಷ್ಟೆ. ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡಿ ಎದ್ದು ಬರುತ್ತಿದ್ದಂತೆಯೇ ಬೆನ್ನು ನೋವು- ಭುಜ ನೋವು!

ಕೆಲಸ ಮುಗಿಸಿ ಬಂದರೂ ಸುಸ್ತು, ರಸ್ತೆಯಲ್ಲಿ ಸಂಚರಿಸಿ ಬಂದರೂ ಸುಸ್ತು. ಬೆನ್ನುನೋವು, ಭುಜ ನೋವು ಜೊತೆಗೆ ಅಸ್ತಮಾ, ರಕ್ತದೊತ್ತಡದಂತಹ ತೊಂದರೆಗಳ ಉಪಟಳ.

ನಮ್ಮ ಜೀವನ ವಿಧಾನ, ಫಾಸ್ಟ್ ಫುಡ್ ಸಂಸ್ಕೃತಿಗಳಿಂದಲೂ ಹಲವಾರು ಬಗೆಯ ರೋಗಗಳಿಗೆ ಆಹ್ವಾನ..!

ಹಾಗೆಂದು ಇವೆಲ್ಲವುಗಳನ್ನು ಬಿಟ್ಟು ಬದುಕುವ ಹಾಗೂ ಇಲ್ಲ. ಇವುಗಳಿಗೆ ಪರಿಹಾರವಾದರೂ ಏನು?

ನೆತ್ತಿಯನ್ನು ನಿತ್ಯ ಸುಡುತ್ತಾನಲ್ಲ ಸೂರ್ಯ - ಅವನೇ ಪರಿಹಾರ ಎನ್ನುತ್ತದೆ ಬೆಂಗಳೂರು ಎಚ್.ಬಿ.ಆರ್. ಬಡಾವಣೆಯ ಸತ್ಸಂಗ ಫೌಂಡೇಷನ್. ಆ ಸೂರ್ಯನಿಗೆ ನಿತ್ಯ ನಮಸ್ಕಾರ ಮಾಡಿ- ನಿಮ್ಮ ಹತ್ತಾರು ರೋಗ, ಸಮಸ್ಯೆಗಳಿಗೆ ಪರಿಹಾರ ತಾನಾಗಿಯೇ ಲಭಿಸುತ್ತದೆ ಎಂಬುದು ಫೌಂಡೇಷನ್ ಭರವಸೆ.

ಅದಕ್ಕಾಗಿಯೇ ಸತ್ಸಂಗ ಫೌಂಡೇಷನ್ ಪ್ರತಿವರ್ಷವೂ 'ಸೂರ್ಯ ನಮಸ್ಕಾರ ಶಿಬಿರ'ವನ್ನು ಸಂಘಟಿಸುತ್ತಿದೆ. ಈ ವರ್ಷವೂ ಫೆಬ್ರುವರಿ 17ರ ಭಾನುವಾರ ಮೂರನೇ ವರ್ಷದ 'ಸೂರ್ಯ ನಮಸ್ಕಾರ- ಸೂರ್ಯ ಯಜ್ಞ' ಶಿಬಿರ ನಡೆಯಲಿದೆ ಕಲ್ಯಾಣ ನಗರದ ಎಚ್ಆರ್ಬಿಆರ್ ಬಡಾವಣೆಯ ಸಿಎಂಆರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ.

'ಸೂರ್ಯ ನಮಸ್ಕಾರ' ಅತ್ಯಂತ ಸರಳವಾದ ವ್ಯಾಯಾಮ. ಒಟ್ಟು ಹನ್ನೆರಡು ಸರಳ ಭಂಗಿಗಳಲ್ಲಿ ಈ ನಮಸ್ಕಾರ ಕ್ರಿಯೆಯನ್ನು ಮಾಡಲಾಗುತ್ತದೆ. ವಾಸ್ತವವಾಗಿ ಇರುವುದು ಏಳು ಭಂಗಿಗಳು ಮಾತ್ರ. ಉಳಿದ ಐದು ಭಂಗಿಗಳು ಮೊದಲ ಐದು ಭಂಗಿಗಳ ಪುನರಾವರ್ತನೆ ಅಷ್ಟೆ. ಒಂದು ನಮಸ್ಕಾರದಲ್ಲಿ ಹಲವಾರು ಯೋಗಾಸನಗಳೂ ಸೇರಿರುವುದು ಸೂರ್ಯ ನಮಸ್ಕಾರದ ವಿಶೇಷ.

ಸೂರ್ಯ ನಮಸ್ಕಾರ ಮಾಡಲು ಯಾವ ಕಷ್ಟವೂ ಇಲ್ಲ, ಇದು ಮಹಾನ್ ಕಸರತ್ತೂ ಅಲ್ಲ. ಇದನ್ನು ಮಾಡಲು ಹೆಚ್ಚಿನ ಜಾಗದ ಅಗತ್ಯವೂ ಇಲ್ಲ.

ಸೂರ್ಯನನ್ನು ಆರಾಧಿಸುವ ಮಂತ್ರಗಳ ಸಹಿತವಾಗಿ ಈ ಸೂರ್ಯ ನಮಸ್ಕಾರ ಮಾಡುವುದರಿಂದ ಆಗುವ ಲಾಭಗಳು ಮಾತ್ರ ಅಪಾರ. ಬೆನ್ನು ಹುರಿಯ ಸಡಿಲಾಗುವಿಕೆ, ಬೆನ್ನು ನೋವು ನಿವಾರಣೆ, ಮಾಂಸಖಂಡಗಳ ಸಡಿಲಾಗುವಿಕೆ, ಮಾನಸಿಕ ತಳಮಳ, ದೇಹದ ಸಂತುಲನೆ ಇತ್ಯಾದಿ ಲಾಭ ಲಭ್ಯ. ರಕ್ತ ಪರಿಚಲನೆ, ಜೀರ್ಣ ಪದ್ಧತಿ, ರಾತ್ರಿಯ ನಿದ್ದೆ ಉತ್ತಮಗೊಳ್ಳುತ್ತದೆ. ಹೀಗಾಗಿ ಸರ್ವತೋಮುಖ ಆರೋಗ್ಯ ವೃದ್ಧಿ.

ನಮ್ಮ ಪ್ರಸ್ತುತ ವೈದ್ಯಕೀಯ ವಿಧಾನದಲ್ಲಿ ರೋಗಬಂದ ಮೇಲೆ ನಿರ್ದಿಷ್ಟ ರೋಗ ಪತ್ತೆ ಹಚ್ಚಿ ಗುಣಪಡಿಸುವ ಔಷಧಿ ನೀಡುತ್ತೇವೆ. ಆದರೆ ನಮ್ಮ ಋಷಿಗಳು ಪ್ರಕೃತಿಯ ಮೇಲೆ ವಿಶ್ವಾಸದಿಂದ, ಸೂರ್ಯನನ್ನೇ ಆಧಾರವಾಗಿ ಇಟ್ಟುಕೊಂಡು ಆರೋಗ್ಯ ಪಡೆಯುವ ಹಲವಾರು ವಿಧಾನಗಳನ್ನು ಕಂಡುಕೊಂಡಿದ್ದಾರೆ. ಸೂರ್ಯ ನಮಸ್ಕಾರ ಅವುಗಳಲ್ಲಿ ಒಂದು.

ರೋಗ ಬಂದ ಮೇಲೆ ಔಷಧಿಗಾಗಿ ಓಡುವ ಬದಲು ನಿತ್ಯ ಸೂರ್ಯ ನಮಸ್ಕಾರ ಮಾಡಿ ಅನಾರೋಗ್ಯ ಬರದಂತೆ ತಡೆಗಟ್ಟುವುದು ಉತ್ತಮ ಎನ್ನುತ್ತದೆ ಸತ್ಸಂಗ ಫೌಂಡೇಷನ್.

ಈ ಹಿನ್ನೆಲೆಯಲ್ಲಿಯೇ ಸೂರ್ಯ ನಮಸ್ಕಾರವನ್ನು ಜನಪ್ರಿಯಗೊಳಿಸಲು '108 ಸೂರ್ಯ ನಮಸ್ಕಾರ' ಮಾಡುವ 'ಸೂರ್ಯ ನಮಸ್ಕಾರ- ಸೂರ್ಯ ಯಜ್ಞ' ಕಾರ್ಯಕ್ರಮ ಸಂಘಟಿಸುತ್ತಿದೆ.

ಹತ್ತು ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಈ ಸೂರ್ಯ ನಮಸ್ಕಾರ ಯಜ್ಞದಲ್ಲಿ ಪಾಲ್ಗೊಳ್ಳಬಹುದು. ರಕ್ತದ ಒತ್ತಡ, ಮಧುಮೇಹ, ಹೃದಯ ತೊಂದರೆ ಮತ್ತು ಬೆನ್ನು ನೋವು ಇರುವವರು ವೈದ್ಯರ ಸಲಹೆ ಪಡೆದು ಪಾಲ್ಗೊಳ್ಳಬಹುದು. ಪಾಲ್ಗೊಳ್ಳುವ ಎಲ್ಲರೂ ಜಮಖಾನ ತರಬೇಕು, ಪುರುಷರು ಬಿಳಿಯ ಪೈಜಾಮ, ಅಂಗಿ, ಮಹಿಳೆಯರು ಬಿಳಿಯ ಚೂಡಿದಾರ್ ಧರಿಸಬೇಕು. ಉಪಾಹಾರದ ಚಿಂತೆ ಬೇಡ - ಅದನ್ನು ಫೌಂಡೇಷನ್ ಒದಗಿಸುತ್ತದೆ. ಶುಲ್ಕ: ಕೇವಲ 20 ರೂಪಾಯಿ.

ಬೆಳಗ್ಗೆ 6.30ಕ್ಕೆ ಸೂರ್ಯ ನಮಸ್ಕಾರ ಆರಂಭವಾಗುತ್ತದೆ. ಜೊತೆಗೆ ಸೂರ್ಯ ಯಜ್ಞ, ಶತ ನಾಮಾವಳಿಯೂ ಇರುತ್ತದೆ.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಯಸುವ ಆಸಕ್ತರಿಗೆ ನಾಗವಾರದ ಆಯುಶ್ರೀ ಆಯುರ್ವೇದ ಮತ್ತು ಯೋಗಕೇಂದ್ರ, ಎಚ್ ಬಿ ಆರ್ ಬಡಾವಣೆಯ ಆಯುರ್ವೇದ ಕುಟೀರ, ಕಾಚರಕನಹಳ್ಳಿಯ ಶ್ರೀರಾಮ ಯೋಗ ಕೇಂದ್ರಗಳಲ್ಲಿ ಪ್ರತಿದಿನ ಮುಂಜಾನೆ 6.30ರಿಂದ 7.30ರವರೆಗೆ ನಿತ್ಯ ತರಬೇತಿ ವ್ಯವಸ್ಥೆಯನ್ನೂ ಮಾಡಲಾಗಿದೆ.

ಇಲ್ಲಿ ಕಲಿತ ಸೂರ್ಯ ನಮಸ್ಕಾರವನ್ನು ಮುಂದೆ ಪ್ರತಿದಿನ ಮನೆಯಲ್ಲೇ ಮಾಡಬಹುದು.

ನೋಂದಣಿ ಹಾಗೂ ಹೆಚ್ಚಿನ ವಿವರಗಳಿಗೆ ಸಂಘಟಕರಾದ ಡಾ. ಶ್ಯಾಮ ಪ್ರಸಾದ್ (25443636), ಡಾ. ರಾಜಾರಾಮ ಪ್ರಸಾದ್ (9448429885), ಸೀತಾರಾಮ (9945188081), ಸೌಮ್ಯ (9880649762), ಜಗನ್ನಾಥ (25448633), ಕೋದಂಡರಾಮ್ (9845206895) ಇವರನ್ನು ಸಂಪರ್ಕಿಸಬಹುದು.

(ಕೃಪೆ: ಪ್ರಜಾವಾಣಿ)

Friday, February 15, 2008

CHUCHHU ಚುಚ್ಚು..

Valentine's Day is over. And now...


CHUCHHU ಚುಚ್ಚು..

by : Prakash Shetty

cour'tesy: Vartha Bharathi

Yes! Here is the Milky Way..!

Some time back I received a mail from journalist friend Shree Padre. I think this mail was forwarded mail from Mr. K.B. Bhat. (kbbhat@gmail.com <kbbhat@gmail.com >) This mail had a sweet message and in the end it gave me two options on that message. Obliviously I had to accept the first option. So PARYAYA decided to publish it here. Then what is that message?

GLASS OF MILK

One day, a poor boy who was selling goods from door to door to pay his way through school, found he had only one thin dime left, and he was hungry.

He decided he would ask for a meal at the next house. However, he lost his nerve when a lovely young woman opened the door.

Instead of a meal he asked for a drink of water. She thought he looked hungry so brought him a large glass of milk. He drank it so slowly, and then asked, "How much do I owe you?"

"You don't owe me anything," she replied. "Mother has taught us never to accept pay for a kindness."

He said ... "Then I thank you from the bottom of my heart."

As Howard Kelly left that house, he not only felt stronger physically, but his faith in God and man was strong also. He had been ready to give up and quit..

Many years’ later that same young woman became critically ill. The local doctors were baffled. They finally sent her to the big city, where they called in specialists to study her rare disease.

Dr. Howard Kelly was called in for the consultation. When he heard the name of the town she came from, a strange light filled his eyes.

Immediately he rose and went down the hall of the hospital to her room.

Dressed in his doctor's gown he went in to see her. He recognized her at once.

He went back to the consultation room determined to do his best to save her life. From that day he gave special attention to her case.

After a long struggle, the battle was won.

Dr. Kelly requested the business office to pass the final bill to him for approval. He looked at it, then wrote something on the edge and the bill was sent t o her room. She feared to open it, for she was sure it would take the rest of her life to pay for it all.

Finally she looked, and something caught her attention on the side of the bill. She read these words.. "Paid in full with one glass of milk"

(Signed) Dr. Howard Kelly.

Tears of joy flooded her eyes as her happy heart prayed: "Thank You God that your love has spread broad through human hearts and hands."

There's a saying which goes something like this: Bread cast on the waters comes back to you. The good deed you do today may benefit you or someone you love at the least expected time. If you never see the deed again at least you will have made the world a better place - And, after all, isn't that what life is all about?!

Now you have two choices.

1. You can send this page on and spread a positive message.

2. Or ignore it and pretend it never touched your heart

The hardest thing to learn in life is which bridge to cross and which -- To burn .

Wednesday, February 13, 2008

Prakash Shetty 'The Fool' Returns..!

Get ready to have the punch of Prakash Shetty’s lines in PARYAYA. He is one of the best Cartoonists that India produced, who has drawn thousands and thousands of caricatures of common men like you and me, apart from caricatures of famous personalities.

Nethrakere Udaya Shankara



Some time back I received a post. It looked peculiar. When I opened it there was a surprise to me. It was an invitation by a Fool for the Griha Pravesham of his house "Fools Paradise’!
Yes. This Fool is none other than Mr. Prakash Shetty, one of my best friends for more than a quarter century!

On that day of his entering Fools Paradise, my another friend BaNaSu (B.N. Subrahamanya) pointed towards a boy and asked me how he looks? Doesn't he look like Prakash Shetty?

His observation was correct. That Boy looked like Prakash Shetty of a Quarter Century ago! That boy is Prakash Shetty's son. Prakash Shetty, B.N. Subrahmanya, Ganesh Kasaragodu, R. Narasimha, Shyam, G.K. Madhyastha, Narasimha Shetty, Ganapathy, Keshava Vittla, Chidambara Baikampady, Manjunath Bhat, Dinesh Amin Mattu, B.M. Haneef, Mohammad, Vihwa Kundapura, Viju Poonachcha, Panju Gangolli and many others including me worked together at several points of time in papers like Praja Prabhutwa, Times of Deccan, Chitradeepa, Munjane, Chitra Tara and Mungaru. For some time myself and Prakash were housemates in Chitrapur of Mangalore, which is situated near pleasant Arabian Sea.

Years passed, but memories remained in our hearts. Prakash went to Kerala State to work in the famous weekly The Week and grown as one of the welknown cartoonists of the country. This is proud thing to us. After several years, now Prakash returned to Karnataka, that too to Bangalore and entered his own house 'Fools Paradise'
.

'PARYAYA' is proud to introduce him in this blog. Here is his brochure and a Cartoon Chuchhu.. Which he contributed to PARYAYA.

In Future too you can have the punch of Prakash Shetty's lines.

This cartoon CHUCHHU is regularly appearing in 'VARTHA BHARATHI' Kannda Daily from Mangalore, hence, cour'tesy goes to this daily also.

So now get ready for:

CHUCHHU ಚುಚ್ಚು..

Wednesday, February 6, 2008

Sanjeevini on the Earth

ಧರಣಿ ಮಂಡಲದ ಸಂಜೀವಿನಿ

'Cow is the Sanjeevini on this Earth' says Shobhana Yermunja. PARYAYA presents this article published in 'Gou Vishwa' or 'Cow Universe', as part of continued discussion on Global Warming. Shobhana explains the benefits from Cow and claims that contribution to Global Warming is more from human beings compared to Cows.


ಶೋಭನಾ ಯರ್ಮುಂಜ

ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ,
ಆಯವರಿತು ಹೊಡೆಯೆ ಮಧುರಗಾನಕ್ಕಾದೆ.
ಹಾದಿಬೀದಿಯಲಿರುವ ಕಸದ ಹುಲ್ಲನು ಹುಡುಕಿ
ಮೇದು, ಮನೆಗೈದಿನಾನಮೃತವೀವೆ; ಅದನುಂಡು ಎನಗೆರಡು
ಬಗೆವ ನೀನಾರಿಗಾದೆಯೋ ಎಲೆ ಮಾನವ?

ಎಂಬ ಗೋಮಾತೆಯ ನುಡಿಯಲ್ಲಿ ಗೋವಿನ ತ್ಯಾಗವನ್ನೂ, ಮಾನವನ ಕ್ರೌರ್ಯವನ್ನೂ ಕವಿ ಎಷ್ಟು ಅರ್ಥಪೂರ್ಣವಾಗಿ ಬಿಂಬಿಸಿದ್ದಾರಲ್ಲವೇ? ಆ ಮಹಾನ್ ಕವಿ ಎಸ್. ಜಿ. ನರಸಿಂಹಾಚಾರ್ಯರಿಗೆ ವಂದನೆಯನ್ನು ಸಲ್ಲಿಸಲೇಬೇಕು.

ಗೋಮಾತೆ ನಮಗೆ ಏನು ನೀಡಿದ್ದಾಳೆ ಎಂಬ ಪ್ರಶ್ನೆಯನ್ನು ನಮಗೆ ನಾವು ಹಾಕಿಕೊಂಡರೆ, ಉತ್ತರ ನೀಡುವುದು ಕಷ್ಟಸಾಧ್ಯವಾಗುತ್ತದೆ. ಏಕೆಂದರೆ ಆಕೆ ಮನುಕುಲಕ್ಕೆ ಸಕಲವನ್ನೂ ನೀಡಿದ್ದಾಳೆ.

ಬೆಳಗಿನಜಾವ ಚುಮುಚುಮು ಚಳಿಯಲ್ಲಿ, ದಿನಪತ್ರಿಕೆಯನ್ನು ಓದುವಾಗ, ಆ ಸುಂದರ ಮುಂಜಾನೆಗೆ ಜೊತೆಯಾಗುವುದು ಬಿಸಿಬಿಸಿಯಾದ ದಪ್ಪಹಾಲಿನಿಂದ ಮಾಡಿದ ಕಾಫಿ ಅಥವಾ ಚಹಾ. ಆ ಪಾನೀಯದ ರುಚಿಯನ್ನುಸವಿಯುವಾಗ ಹಾಲನ್ನು ನಮಗಿತ್ತ ಗೋಮಾತೆಯ ಬಗ್ಗೆ ಒಂದು ಕ್ಷಣವಾದರೂ ಆಲೋಚಿಸುತ್ತೇವೆಯೇ? ಹಾಲಿನ ಉತ್ಪನ್ನಗಳಿಂದ ತಯಾರಿಸಿದ ಸಿಹಿತಿಂಡಿಗಳನ್ನು ಬಾಯಿ ಚಪ್ಪರಿಸಿ ತಿನ್ನುವಾಗ ಗೋಮಾತೆಯನ್ನು ಸ್ಮರಿಸುತ್ತೇವೆಯೇ?

ಹೋಗಲಿ, ಉದ್ಯಾನದಲ್ಲಿ ಕುಳಿತಾಗ ಕಣ್ತುಂಬುವ ಪುಷ್ಪಗಳ ಬೆಳವಣಿಗೆಗೆ ಗೊಬ್ಬರದ ಕಾಣಿಕೆಯಿತ್ತ ಆ ಗೋಮಾತೆಯ ಬಗ್ಗೆ ನಾವು ಆಲೋಚಿಸಿದ್ದೇವೆಯೇ? ಪ್ರಾಮಾಣಿಕವಾಗಿ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದರೆ, `ಇಲ್ಲ' ಎಂಬ ಉತ್ತರವೇ ದೊರೆಯುತ್ತದೆ. ಹಾಗಾದರೆ ನಾವೆಷ್ಟು ಕೃತಘ್ನರಲ್ಲವೇ?

ಮಾನವ ತಾಯಿಯ ಹಾಲಿನ ನಂತರ ಕುಡಿಯುವುದೇ ಹಸುವಿನ ಹಾಲು. ವೈಜ್ಞಾನಿಕವಾಗಿ ಹಸುವಿನ ಹಾಲು ಎಲ್ಲಾ ರೀತಿಯ ಪೋಷಕಾಂಶಗಳಿರುವ ಪರಿಪೂರ್ಣ ಆಹಾರ. ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಪೂಜ್ಯಸ್ಥಾನವಿದೆ. ಆಕೆಯಲ್ಲಿ ಕೋಟಿ ದೇವತೆಗಳು ವಾಸಿಸುತ್ತಾರೆ ಎಂಬ ನಂಬಿಕೆಯಿದೆ. ಒಂದು ರೀತಿಯಲ್ಲಿ ಹೇಳುವುದಾದರೆ ಗೋಮಾತೆ `ನಡೆದಾಡುವ ದೇಗುಲ'.

ಅಂತಹ ಗೋಮಾತೆಯನ್ನು ಪೂಜಿಸುವುದಿರಲಿ, ನೆನೆಸಿಕೊಳ್ಳಲಾದರೂ ಮಾನವನಿಗೆ ಸಮಯವಿದೆಯೇ ? ಅವಳನ್ನು ನೆಮ್ಮದಿಯಿಂದ ಬದುಕಲು ಬಿಡುವ ಮನಸ್ಥಿತಿಯೂ ಮಾನವನಿಗಿಲ್ಲ. ತನ್ನ ರಕ್ತದ ಹನಿಹನಿಯನ್ನು ಮಾನವನ ಉಪಯೋಗಕ್ಕಾಗಿ ಮೀಸಲಿಟ್ಟ ಆಕೆಯನ್ನು ಹೊಡೆದು, ಕಡಿದು ತಿನ್ನುವತ್ತ ಮಾನವನು ಉತ್ಸುಕನಾಗಿದ್ದಾನೆ ಎಂದರೆ ಅದು ವಿಪರ್ಯಾಸವಲ್ಲದೆ ಇನ್ನೇನು? ಇದು ಆತನ ಬುದ್ಧಿವಂತಿಕೆಯ ಲಕ್ಷಣವೋ ಅಥವಾ ಅಥವಾ ಮೂರ್ಖತನದ ಪರಮಾವಧಿಯೋ?

ಪುರಾಣಗಳಲ್ಲಿ ಹೇಳಿದುದು ಮಾತ್ರವಲ್ಲ, ವೈಜ್ಞಾನಿಕವಾಗಿಯೂ ಗೋವಿನಿಂದ ಉತ್ಪತ್ತಿಯಾಗುವ ಪ್ರತಿಯೊಂದು ವಸ್ತುವೂ ಉಪಯುಕ್ತ ಹಾಗೂ ಅನೇಕ ಮಾರಕ ರೋಗಗಳಿಗೆ ರಾಮಬಾಣ. ತೋಟಗಾರಿಕೆ ನನ್ನ ತಾಯಿಯ ಪ್ರಿಯವಾದ ಹವ್ಯಾಸ. ಮನೆಯ ಕೈದೋಟದಲ್ಲಿ ವಿವಿಧ ಬಗೆಯ ಹೂಗಳನ್ನೂ, ತರಕಾರಿಗಳನ್ನೂ ಬೆಳೆಸಿದ್ದರು. ಆದರೆ ಹೂವಿನ ಮೊಗ್ಗು ಅರಳುವ ಮೊದಲೇ ಯಾವುದೋ ಕೀಟಕ್ಕೆ ಆಹಾರವಾಗುತ್ತಿತ್ತು. ಕೀಟ ಎಲೆಗಳನ್ನೂ ಬಿಡದೆ ಭಕ್ಷಿಸಿದುದರಿಂದ ಹೂವಿನ ಗಿಡಗಳು ಸಾವಿಗೆ ಈಡಾಗುತ್ತಿದ್ದವು.

ಬೆಳೆಸಿದ ಅಲಸಂದೆ ಕಾಯಿಗಳ ಮೇಲೆ `ಬಂಬುಚ್ಚಿ' ಎಂಬ ಕೀಟ ಕುಳಿತು ಅದರ ಸಾರವನ್ನೆಲ್ಲಾ ಹೀರಿ ಬಿಡುತ್ತಿತ್ತು. ಹರಿವೆ ಗಿಡಗಳು (ದಂಟಿನಸೊಪ್ಪು) ಕಂಬಳಿ ಹುಳಗಳಿಗೆ ಆಹಾರವಾಗುತ್ತಿದ್ದವು. ಕೊನೆಗೆ ಯಾರದೋ ಸಲಹೆ ಮೇರೆಗೆ ಗೋಮೂತ್ರವನ್ನು ಸಿಂಪಡಿಸಿದಾಗ ದೊರೆತ ಫಲಿತಾಂಶ ಮಾತ್ರ ಅದ್ಭುತವಾಗಿತ್ತು. ತರಕಾರಿ, ಹೂವಿನ ಗಿಡಗಳನ್ನು ಹಾಳುಗೆಡಹುತ್ತಿದ್ದ ಕೀಟಗಳೆಲ್ಲಾ ಮಾಯ! ಇಂದು ನಮ್ಮಲ್ಲಿ ಗಿಡಗಳು ಹುಲುಸಾಗಿ, ಆರೋಗ್ಯವಾಗಿ ಬೆಳೆಯುತ್ತಿವೆ.

ಇದರಿಂದ ಗೋಮೂತ್ರ ಅತ್ಯಂತ ಉಪಯುಕ್ತ ಕೀಟನಾಶಕ ಎಂಬುದು ಸ್ಪಷ್ಟವಾಗುತ್ತದೆ. ಇದರಿಂದ ಯಾವುದೇ ರೀತಿಯ ದುಷ್ಪರಿಣಾಮಗಳಿಲ್ಲ. ಕೆಲವರು ಅದೆಷ್ಟೋ ಪ್ರಮಾಣದಲ್ಲಿ ಕಾಸರಕನ ಎಲೆಗಳನ್ನು ಗೋಮೂತ್ರದಲ್ಲಿ ಕೊಳೆಯಿಸಿ,ಕೀಟನಾಶಕವಾಗಿ ಉಪಯೋಗಿಸಿ, ಯಶಸ್ವಿಯಾಗಿದ್ದಾರೆ. ಗೋಮೂತ್ರ ಹಾಗೂ ಗೋಮಯ ಬೆರೆತ, ಹಟ್ಟಿತೊಳೆದ ನೀರನ್ನು ಗಿಡಗಳಿಗೆ ಉಣಿಸುವುದರಿಂದ ಗಿಡಗಳು ಹುಲುಸಾಗಿ ಬೆಳೆಯುತ್ತವೆ ಹಾಗೂ ಒಳ್ಳೆಯ ಫಸಲನ್ನೂ ನೀಡುತ್ತವೆ.

ಇದನ್ನು ಉಪಯೋಗಿಸುವಾಗ ಬೇರೆ ಗೊಬ್ಬರಗಳ ಅವಶ್ಯಕತೆಯಿಲ್ಲ. ಇದರಿಂದ ಗೋಮೂತ್ರ ಹಾಗೂ ಗೋಮಯ ಗಿಡಗಳಿಗೆ ಉತ್ತಮ ಗೊಬ್ಬರ ಎಂಬುದು ಸ್ಪಷ್ಟವಾಗುತ್ತದೆ.


ಮಂಗಳೂರಿನ ನಿರ್ಮಲಾ (ಹೆಸರು ಬದಲಾಯಿಸಲಾಗಿದೆ) ಎಂಬುವವರು ಬಾಯಿಯ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಕ್ಯಾನ್ಸರ್ ಹುಣ್ಣುಗಳು ಗಂಟಲು, ಅನ್ನನಾಳವನ್ನು ವ್ಯಾಪಿಸಿದ್ದವು. ವೈದ್ಯರು ಅವರ ರೋಗ ಅಂತಿಮ ಸ್ಥಿತಿಯಲ್ಲಿದೆ; ಆಕೆಬದುಕುವುದು ಸಂಶಯ ಎಂದಿದ್ದರು. ಕೊನೆಗೆ ಯಾರೋ ಒಬ್ಬರು ವೈದ್ಯರ ಸಲಹೆಯ ಮೇರೆಗೆ, ನಿರ್ಮಲಾ ಗೋಮೂತ್ರದಿಂದ ತಯಾರಿಸಿದ ಅರ್ಕವನ್ನು ಉಪಯೋಗಿಸಲಾರಂಭಿಸಿದರು. ಯಮಲೋಕದ ಬಾಗಿಲು ತಟ್ಟುತ್ತಿದ್ದ ನಿರ್ಮಲಾರನ್ನು ಗೋ ಅರ್ಕ ಹಿಂದಕ್ಕೆ ಕರೆತಂದಿದೆ. ಆಶ್ಚರ್ಯವಾಗುತ್ತಿದೆಯಲ್ಲವೇ? ಇಂದು ಆಕೆ ಸಂಪೂರ್ಣ ಗುಣಮುಖರಾಗಿದ್ದಾರೆ.

ಗೋ ಅರ್ಕವನ್ನು ಸೇವಿಸಿದುದರಿಂದ ರಕ್ತದೊತ್ತಡ, ಮಧುಮೇಹಗಳು ನಿಯಂತ್ರಣದಲ್ಲಿವೆ ಎಂದು ಅದರ ಉಪಯೋಗ ಪಡೆದುಕೊಂಡ ಅನೇಕರು ಹೇಳುತ್ತಾರೆ. ಗೋಅರ್ಕ ಸೇವಿಸಿದುದರಿಂದ ಮುಖದಲ್ಲಿ ಮೊಡವೆಗಳ ಹಾವಳಿ ಕಡಿಮೆಯಾಗಿದೆ ಎಂಬುದು ಕೋಮಲಾಂಗಿಯರ ಹೇಳಿಕೆ. ಗೋಮೂತ್ರದಿಂದ ತಯಾರಿಸಿದ ಅರ್ಕ, ಕ್ಯಾನ್ಸರ್ ರೋಗ ನಿವಾರಕ ಎಂದು ನಮ್ಮ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಅಂಗೀಕೃತವಾಗಿದೆ; ಜೊತೆಗೆ ಲೀಟರ್ಗೆ 6 ರೂ.ಗಳಂತೆ ಮಾರಾಟವಾಗುತ್ತಿದೆ.

ಗೋಮೂತ್ರ ಹಾಗೂ ಗೋಮಯದಿಂದ ತಯಾರಿಸಿದ ಶ್ಯಾಂಪೂ ಬಹಳ ಉಪಯುಕ್ತವಾಗಿದೆ. ಅದನ್ನು ಉಪಯೋಗ ಮಾಡುವುದರಿಂದ ತಲೆಹೊಟ್ಟು, ಕೂದಲಿನ ಸೀಳುವಿಕೆ ಕಡಿಮೆಯಾಗುತ್ತದೆ; ಜೊತೆಗೆ ಕೆಂಬಣ್ಣಕ್ಕೆ ತಿರುಗುತ್ತಿರುವಕೂದಲು ಕಪ್ಪಾಗುತ್ತದೆ. ಇದು ನನ್ನ ಸ್ವಂತ ಅನುಭವ.

ಗೋಮಯದಿಂದ ತಯಾರಿಸಿರುವ ಸಾಬೂನು ಅನೇಕ ಚರ್ಮರೋಗಗಳ ನಿವಾರಣೆಯಲ್ಲಿ ಹಾಗೂ ತಡೆಗಟ್ಟುವಿಕೆಯಲ್ಲಿ ಸಹಕಾರಿಯಾಗಿದೆ. ಗೋಮಯದಿಂದ ತಯಾರಿಸಲಾಗಿರುವ ದಂತಮಂಜನ ಒಸಡುಗಳಲ್ಲಿನ ರಕ್ತಸ್ರಾವವನ್ನೂ, ದಂತಕುಳಿಯನ್ನೂ ಕಡಿಮೆಗೊಳಿಸುತ್ತದೆ. ಗೋಮಯದಿಂದ ವಿಭೂತಿ, ಗಂಧದ ಕಡ್ಡಿಗಳನ್ನು ತಯಾರಿಸುತ್ತಾರೆ. ಇವುಗಳು ಅತ್ಯಂತ ಸುಗಂಧಭರಿತವಾಗಿವೆ. ನಾನು ಇಲ್ಲಿ ಗೋವಿನ ಉತ್ಪನ್ನಗಳಿಗೆ ಜಾಹೀರಾತು ನೀಡುತ್ತಿದ್ದೇನೆ ಎಂದು ಭಾವಿಸಬೇಡಿ. ಉಪಯೋಗ ಪಡೆದುಕೊಂಡವರ ಮಾತುಗಳಿಗೆ ಅಕ್ಷರಗಳ ರೂಪವನ್ನು ನೀಡುವ ಪ್ರಯತ್ನವನ್ನಷ್ಟೇ ಇಲ್ಲಿ ಮಾಡಲಾಗಿರುವುದು.

ಗೋವುಗಳು ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಕಾರಣವಾಗುತ್ತವೆಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ ಎಂಬ ಲೇಖನವನ್ನು ಓದಿದ್ದೇನೆ. ಆದರೆ ಮಾನವ ಕಾರಣವಾಗುವಷ್ಟು ಗೋವುಗಳು ಖಂಡಿತಾ ಕಾರಣವಾಗಲಾರವು. ಗೋವುಗಳು ಮೆಲುಕು ಹಾಕುವಾಗ ಉತ್ಪತ್ತಿಯಾಗುವ ಮೀಥೇನ್ ಅನಿಲ ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸಂಶೋಧನೆಗಳು ಹೇಳುತ್ತವೆ. ಆದರೆ ಮನುಷ್ಯನ ಕಾರ್ಯಚಟುವಟಿಕೆಗಳಿಂದ, ಆತನ ಹೊಸ ಹೊಸ ಅನ್ವೇಷಣೆಗಳ ಕೂಸುಗಳಿಂದ ಉತ್ಪತ್ತಿಯಾಗುವ ಮೀಥೇನ್ ಅನಿಲಕ್ಕೆ ಹೋಲಿಸಿದರೆ, ಗೋವುಗಳು ಮೆಲುಕು ಹಾಕುವಾಗ ಉತ್ಪತ್ತಿಯಾಗುವ ಮೀಥೇನ್ ಅನಿಲದ ಪ್ರಮಾಣ ಅತ್ಯಂತ ಕಡಿಮೆ. ಪರಿಸರದ ಮಲಿನತೆಗೆ ಮನುಷ್ಯ ನೀಡುವಷ್ಟು ಕೊಡುಗೆಯನ್ನು ಬೇರೆ ಯಾವ ಜೀವಿಯೂ ನೀಡಲಾರದು.

ಹಸುಗಳಿಗೆ ವಯಸ್ಸಾದಾಗ, ಅವುಗಳ ಸಂತಾನೋತ್ಪತ್ತಿ ಕಾಲ ಮುಗಿದಾಗ, ನಾವು ಅವುಗಳನ್ನು ಕಸಾಯಿಖಾನೆಗಳಿಗೆ ಒಪ್ಪಿಸುತ್ತೇವೆ. ಜೀವಂತ ಹಸುಗಳ ಮೈಗೆ ಬಿಸಿ ನೀರು ಸುರಿದು, ಧರ್ಮ ಸುಲಿದು ಕೈಚೀಲ, ಚಪ್ಪಲಿಗಳನ್ನು ತಯಾರಿಸಿ ಮೆರೆಯುತ್ತೇವೆ. ಹಸುಗಳ ಆ ಪರಿಸ್ಥಿತಿ ನಮಗೆ ಬಂದೊದಗಿದರೆ ಹೇಗಿರಬಹುದು?

ಗೋಮಾಂಸವನ್ನು ತಿನ್ನದೆ ಬದುಕಲು ಮಾನವನಿಂದ ಸಾಧ್ಯವಿದೆ; ಆದರೆ ಗೋವಿನ ಹಾಲು ಕುಡಿಯದೆ ಬದುಕಲು, ಹಾಲಿನಿಂದ ತಯಾರಿಸಿದ ಉತ್ಪನ್ನಗಳನ್ನು ಉಪಯೋಗಿಸದೆ ಬದುಕಲು ಸಾಧ್ಯವಿದೆಯೇ? ಯಾರಾದರೂ ನಾವು ಕೇವಲ ಗೋಮಾಂಸವನ್ನು ತಿಂದು, ಗೋವಿನ ಹಾಲು ಕುಡಿಯದೆ ಹಾಲಿನಿಂದ ತಯಾರಿಸಿದ ಉತ್ಪನ್ನಗಳನ್ನು ಉಪಯೋಗಿಸದೆ ಬದುಕುತ್ತೇವೆ ಎಂದು ಹೇಳಲಿ, ನೋಡೋಣ!

ಉಪಯೋಗವಿದ್ದಾಗ ಉಪಯೋಗಿಸಿಕೊಂಡು, ಬೇಡವಾದಾಗ ಬಿಸಾಕುವ ಹೀನರು ಮಾನವರು! ನಮ್ಮದು ಬಡದೇಶ, ಅವುಗಳಿಂದ (ಗೋವು) ಯಾವುದೇ ಉತ್ಪತ್ತಿ ಇಲ್ಲದಾದಾಗ ಅವುಗಳನ್ನು ಸಾಕುವ ಖರ್ಚನ್ನು ನಿಭಾಯಿಸುವುದು ಹೇಗೆ? ಎಂಬ ಪ್ರಶ್ನೆ ಏಳುವುದು ಸಹಜ. ಆದರೆ ನಮಗೂ ವಯಸ್ಸಾದಾಗ ದೇಹ ಕಾಯಿಲೆಗಳ ಗೂಡಾದಾಗ ನಮ್ಮಿಂದಲೂ ಯಾವುದೇ ಉಪಯೋಗವಿಲ್ಲ. ಆಗ ನಮ್ಮ ಮಕ್ಕಳೂ ಔಷಧೋಪಚಾರಗಳ ಖರ್ಚನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ನಮ್ಮನ್ನೂ ಕಸಾಯಿಖಾನೆಗೆ ಒಪ್ಪಿಸಿದರೆ ಪರಿಸ್ಥಿತಿ ಹೇಗಿರಬಹುದು? ಒಂದು ಕ್ಷಣ ಯೋಚಿಸಿ ನೋಡಿ. ಈ ಪ್ರಶ್ನೆಗೆ ನಮ್ಮಲ್ಲಿ ಉತ್ತರವಿದೆಯೇ?

ಗೋವಿಗೆ ವಯಸ್ಸಾದರೂ, ಅದರಿಂದ ದೊರೆಯುವ ಸಂಜೀವಿನಿಯಾದ ಗೋಮೂತ್ರ ಹಾಗೂ ಗೋಮಯ ದೊರೆತೇ ದೊರೆಯುತ್ತದೆ. ಗೋವು ತನ್ನ ಹುಟ್ಟಿನಿಂದ ಸಾವಿನವರೆಗೂ ಕಾಮಧೇನುವಾಗಿ ಮನುಷ್ಯನ ಹೆಚ್ಚಿನ ಆಗತ್ಯಗಳನ್ನು ಪೂರೈಸುತ್ತದೆ.

ವಿಷವ ಕಕ್ಕುವ ನರನ ಕ್ಷಮಿಸಿ

ಅಮೃತವೀವ ತಾಯಿ ನೀ

ತಾಳ್ಮೆ ಕ್ಷಮಾ ಸಹನವಾಹಿನಿ

ಗೋ ಮಾತೆ ನೀ ಸಂಜೀವಿನಿ


ಆದುದರಿಂದ ಗೋವಿನ ಸಂರಕ್ಷಣೆ ಜಗತ್ತಿನ ಮಾನವರೆಲ್ಲರ ಹೊಣೆಯಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳಿಗೆ ನಮ್ಮ ನುಡಿ ನಮನಗಳನ್ನು ಸಲ್ಲಿಸಲೇಬೇಕು. ಧರಣಿ ಮಂಡಲದ ಸಂಜೀವಿನಿಯ ಅಳಿವು-ಉಳಿವು ಮಾನವರ ಕೈಯಲ್ಲಿದೆ. ಗೋವಿಲ್ಲದ ಪ್ರಪಂಚವನ್ನು, ಬದುಕನ್ನು ಊಹಿಸಿಕೊಳ್ಳುವುದೂ ಅಸಾಧ್ಯ.

"ಗಾವಃ ವಿಶ್ವಸ್ಯ ಮಾತರಃ"

ಕೃಪೆ: 'ಗೋ ವಿಶ್ವ' ಸರ್ವಜಿತ್ ಸಂವತ್ಸರ ಭಾದ್ರಪದ ನವಂಬರ್ 2007 ಸಂಪುಟ-1 ಸಂಚಿಕೆ-2

Advertisement